Select Your Language

Notifications

webdunia
webdunia
webdunia
Saturday, 12 April 2025
webdunia

ಹುಡುಗಿ ಫೋನ್ ಕರೆ ಸ್ವೀಕರಿಸದಿದ್ದಕ್ಕೆ ಹೆಣವಾದಳಾ?

ಯುವತಿ
ನವದೆಹಲಿ , ಭಾನುವಾರ, 28 ಜುಲೈ 2019 (18:28 IST)
ಫೋನ್ ಕರೆ ಸ್ವೀಕರಿಸುತ್ತಿರಲಿಲ್ಲ ಎಂದು ರೊಚ್ಚಿಗೆದ್ದ ಯುವಕನೊಬ್ಬ ಯುವತಿಯೊಬ್ಬಳನ್ನು ನಡುರಸ್ತೆಯಲ್ಲಿ ಕೊಲೆ ಮಾಡಿರುವ ಘಟನೆ ನಡೆದಿದೆ.

ಆ ಯುವತಿಯು ಯುವಕನ ಕರೆ ಸ್ವೀಕರಿಸುತ್ತಿರಲಿಲ್ಲ ಎನ್ನಲಾಗಿದೆ. ಹೀಗಾಗಿ ಜನರು ನೋಡನೋಡುತ್ತಿದ್ದಂತೆಯೇ ಯುವತಿಗೆ ಚಾಕುವಿನಿಂದ ತಿವಿದು ಯುವಕ ಕೊಲೆ ಮಾಡಿದ್ದಾರೆ.

ದೆಹಲಿಯ ಭೋಗಸ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಘಟನೆಯಲ್ಲಿ ಯುವತಿ ಮೃತಪಟ್ಟಿದ್ದರೆ ಕೊಲೆಗಾರನನ್ನು ಮುನ್ನಾ ಅಲಿಯಾಸ್ ಮುನಾಸೀರ್ ಎಂದು ಗುರ್ತಿಸಲಾಗಿದೆ.

ಕೊಲೆ ಪ್ರಕರಣವನ್ನು ದಾಖಲು ಮಾಡಿಕೊಂಡಿರೋ ಪೊಲೀಸರು ಯುವಕ ಹಾಗೂ ಯುವತಿ ನಡುವಿನ ಸಂಬಂಧವೇನಿತ್ತು? ಯಾವ ಕಾರಣಕ್ಕೆ ಯುವತಿಯ ಕೊಲೆ ಆಗಿದೆ ಅಂತ ತನಿಖೆಯನ್ನು ಕೈಗೊಂಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಅತೃಪ್ತ ಶಾಸಕರು ಅನರ್ಹರು: ಸ್ಪೀಕರ್ ಖಡಕ್ ಆದೇಶ