Select Your Language

Notifications

webdunia
webdunia
webdunia
webdunia

ಸಿಎಂ ಸಿದ್ದರಾಮಯ್ಯ ಮೈಯಲ್ಲಿ ಟಿಪ್ಪು ರಕ್ತ ಹರಿತಿದೆ: ಕೆ.ಎಸ್.ಈಶ್ವರಪ್ಪ

ಸಿಎಂ ಸಿದ್ದರಾಮಯ್ಯ ಮೈಯಲ್ಲಿ ಟಿಪ್ಪು ರಕ್ತ ಹರಿತಿದೆ: ಕೆ.ಎಸ್.ಈಶ್ವರಪ್ಪ
ಬಂಟ್ವಾಳ , ಶನಿವಾರ, 11 ನವೆಂಬರ್ 2017 (14:31 IST)
ಸಿಎಂ ಸಿದ್ದರಾಮಯ್ಯ ಮೈಯಲ್ಲಿ ಟಿಪ್ಪು ಸುಲ್ತಾನ್ ರಕ್ತ ಹರಿತಿದೆ. ನನ್ನ ಮೈಯಲ್ಲಿ ಕನಕದಾಸರ ರಕ್ತ ಹರಿತಿದೆ ಎಂದು ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ತಮ್ಮ ಹೆಸರು ಬದಲಿಸಿ ಟಿಪ್ಪು ಎಂದು ಕರೆದುಕೊಳ್ಳಲಿ. ರಾಜ್ಯದಲ್ಲಿ ರಾಷ್ಟ್ರಭಕ್ತರ ಹತ್ಯೆಗಳಾಗುತ್ತಿವೆ. ಪೊಲೀಸರನ್ನು ಇಟ್ಟುಕೊಂಡು ಆಟವಾಡ್ತೀರಾ ಸಿದ್ದರಾಮಯ್ಯನವರೇ? ಕುಲ ಕುಲಕ್ಕೆ ಬೆಂಕಿ ಹಚ್ಚುತ್ತಿದ್ದಾರೆ ಎಂದು ವಾಕ್ ಪ್ರಹಾರ್ ನಡೆಸಿದರು
 
ರಾಷ್ಟ್ರಭಕ್ತರನ್ನು ಹಣಿಯಲು ಇಂದಿರಾಗಾಂಧಿಯವರಿಂದಲೇ ಸಾಧ್ಯವಾಗಲಿಲ್ಲ. ಇನ್ನು ನಿಮ್ಮಿಂದ ಸಾಧ್ಯವೇ? ಮುಸ್ಲಿಮರು ಹಿಂದುಗಳನ್ನು ಹತ್ಯೆ ಮಾಡುವಾಗ ನಿಮ್ಮ ರಕ್ತ ಕುದಿಯಲಿಲ್ಲವೇ? ನಿಮ್ಮ ಸಚಿವ ರೈ ಘಟೋದ್ಘಜ ಮುಸ್ಲಿಂವಾದಿ ಎಂದು ತಿರುಗೇಟು ನೀಡಿದರು.
 
ಸಿಎಂ ಸಿದ್ದರಾಮಯ್ಯಗೆ ಹೆಣ್ಣುಮಕ್ಕಳಿಲ್ಲ. ಆದ್ದರಿಂದ, ಹೆಣ್ಣುಮಕ್ಕಳು ಎದುರಿಸುವ ಸಂಕಷ್ಟಗಳು ಅವರಿಗೆ ಅರ್ಥವಾಗುವುದಿಲ್ಲ ಎಂದು ಕಿಡಿಕಾರಿದ್ಗಾರೆ.
 
ಸಿಎಂ ಸಂಪುಟದ ಸಚಿವರೊಬ್ಬರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಅವಾಜ್ ಹಾಕಿ ಕಲ್ಲಡ್ಕ ಪ್ರಭಾಕರ್‌ರನ್ನು ಬಂಧಿಸುವಂತೆ ಒತ್ತಡ ಹೇರ್ತಾರೆ. ಅವರ ಒಂದು ರೋಮ ಮುಟ್ಟಿದರೆ ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗುತ್ತದೆ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಗುಡುಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿಯವರಂತಹ ಭ್ರಷ್ಟ, ಕೊಳಕ ರಾಜಕಾರಣಿಗಳು ಬೇರೆ ಇಲ್ಲ: ಸಿಎಂ