Publish Date: Fri, 19 Jun 2020 (17:19 IST)
Updated Date: Fri, 19 Jun 2020 (17:21 IST)
ಕೊರೊನಾ ವೈರಸ್ ತಡೆಗೆ ಜೂನ್ 30 ರವರೆಗೆ ಮೂರು ಜಿಲ್ಲೆಗಳು ಹಾಗೂ ಪ್ರಮುಖ ಕೇಂದ್ರವೊಂದರಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ ಘೋಷಣೆ ಮಾಡಲಾಗಿದೆ.
ಚೆನ್ನೈ, ತಿರುವಳ್ಳೂರು, ಕಾಂಚೀಪುರಂ, ಚೆಂಗಲ್ ಪೇಟೆ ಜಿಲ್ಲೆಗಳಲ್ಲಿ ಬಿಗಿ ಲಾಕ್ ಡೌನ್ ನ್ನು ಸಿಎಂ ಎಡಪ್ಪಾಡಿ ಕೆ ಪಳನಿಸ್ವಾಮಿ ಘೋಷಣೆ ಮಾಡಿದ್ದಾರೆ.
ಸ್ಥಳೀಯ ರೈಲು, ಸಾರಿಗೆ ಎಲ್ಲವೂ ಬಂದ್ ಆಗಿವೆ. ಸಾವಿರಾರು ಜನರು ತಮ್ಮ ಊರಿಗೆ ಮರಳಿದ್ದಾರೆ.
ಲಾಕ್ ಡೌನ್ ಟೈಟ್ ಮಾಡಿರುವುದರಿಂದಾಗಿ ಚೆನ್ನೈ ಹಾಗೂ ಪ್ರಮುಖ ಜಿಲ್ಲಾಕೇಂದ್ರಗಳ ಮುಖ್ಯರಸ್ತೆಗಳು ಬಿಕೋ ಎನ್ನುತ್ತಿದ್ದವು.