Select Your Language

Notifications

webdunia
webdunia
webdunia
webdunia

ಸಿಡಿಲು ಬಡಿದು ಸಾವು; ಪರಿಹಾರ ಚೆಕ್ ವಿತರಿಸಿದ ಸಚಿವ ಖರ್ಗೆ

ಸಿಡಿಲು ಬಡಿದು ಸಾವು; ಪರಿಹಾರ ಚೆಕ್ ವಿತರಿಸಿದ ಸಚಿವ ಖರ್ಗೆ
ಕಲಬುರಗಿ , ಶನಿವಾರ, 8 ಜೂನ್ 2019 (17:51 IST)
ಸಿಡಿಲು ಬಡಿದು ಸಾವನ್ನಪ್ಪಿದ ಮೂವರ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಸಚಿವರು ಸಾಂತ್ವನ ಹೇಳಿದ್ರು.

ಕಲಬುರಗಿ ಜಿಲ್ಲೆಯ ಚಿಂಚೋಳಿ ಮತಕ್ಷೇತ್ರದ ಮಂಗಲಗಿ ಗ್ರಾಮದಲ್ಲಿ ಇತ್ತೀಚಿಗೆ ಸಿಡಿಲು ಬಡಿದು ಸಾವನ್ನಪ್ಪಿದ ಮೂವರ ಕುಟುಂಬದ ಸದಸ್ಯರಿಗೆ ಸಮಾಜಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಭೇಟಿ ಮಾಡಿ ಸಾಂತ್ವಾನ ಹೇಳಿದರು. 

ಇದೇ ಸಂದರ್ಭದಲ್ಲಿ ಮೃತರ ಕುಟುಂಬ ವರ್ಗದವರಿಗೆ ತಲಾ ರೂ. 5 ಲಕ್ಷ ಪರಿಹಾರದ ಚೆಕ್ ಗಳನ್ನು ವಿತರಿಸಿದರು.

ಮೃತರ ಕುಟುಂಬ ವರ್ಗದವರಿಗೆ  ಆಶ್ರಯ ಯೋಜನೆಯಡಿಯಲ್ಲಿ ಮನೆ ಮಂಜೂರು ಮಾಡುವಂತೆ ಸ್ಥಳದಲ್ಲಿ ಇದ್ದ ಚಿತ್ತಾಪುರ ತಹಸೀಲ್ದಾರ ಅವರಿಗೆ ಸಚಿವರು ಸೂಚಿಸಿದರು. 

ಶಫಿಕಾ‌ ಬೇಗಂ, ಅಲ್ಫಿಯಾ ಬೇಗಂ ಹಾಗೂ ಅಬೇದಾಬಿ ಈ ಮೂವರು ಇತ್ತೀಚಿಗೆ ಸಿಡಿಲು ಬಡಿದು ಸಾವನ್ನಪ್ಪಿದ್ದರು.

 

Share this Story:

Follow Webdunia kannada

ಮುಂದಿನ ಸುದ್ದಿ

ಸಂಘದ ನೂತನ ಸದಸ್ಯತ್ವಕ್ಕೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ