Publish Date: Sun, 02 Jun 2019 (07:07 IST)
Updated Date: Sun, 02 Jun 2019 (07:08 IST)
ಬೆಂಗಳೂರು : ಕಪ್ಪು ಎಳ್ಳು ಆರೋಗ್ಯಕ್ಕೆ ಉತ್ತಮವಾದದ್ದು ಮಾತ್ರವಲ್ಲ ಅದರಿಂದ ದೋಷಗಳನ್ನು ಕೂಡ ಪರಿಹಾರ ಮಾಡಿಕೊಳ್ಳಬಹುದು. ಕಪ್ಪುಎಳ್ಳನ್ನು ಪೂಜೆ-ಪುನಸ್ಕಾರದಲ್ಲಿ ಬಳಸಲಾಗುತ್ತದೆ. ಅಲ್ಲದೇ ಇದು ಶನಿಗೆ ಬಹಳ ಪ್ರಿಯವಾದ ವಸ್ತು.
ಒಂದು ಲೋಟ ಶುದ್ಧ ನೀರಿಗೆ ಕಪ್ಪು ಎಳ್ಳನ್ನು ಹಾಕಿ. ಈ ನೀರನ್ನು ಶಿವಲಿಂಗಕ್ಕೆ ಓಂ ನಮಃ ಶಿವಾಯ ಮಂತ್ರವನ್ನು ಜಪಿಸುತ್ತ ಅರ್ಪಿಸಿದರೆ ದೋಷಗಳು ಪರಿಹಾರವಾಗುತ್ತದೆ. ಕಪ್ಪು ಎಳ್ಳನ್ನು ದಾನವಾಗಿ ನೀಡುವುದರಿಂದ ರಾಹು-ಕೇತು-ಶನಿಯ ಕೆಟ್ಟ ದೃಷ್ಟಿ ನಿಮ್ಮ ಮೇಲೆ ಬೀಳುವುದಿಲ್ಲ. ಕಾಳಸರ್ಪ ದೋಷ, ಸಾಡೆ ಸಾಥ್, ಪಿತೃ ದೋಷ ಎಲ್ಲ ಪರಿಹಾರವಾಗುತ್ತದೆ.
ಪ್ರತಿ ಶನಿವಾರ ಹಾಲಿಗೆ ಕಪ್ಪು ಎಳ್ಳನ್ನು ಬೆರೆಸಿ ಅಶ್ವತ್ಥ ಗಿಡಕ್ಕೆ ಅರ್ಪಿಸಿದರೆ ಕೆಟ್ಟ ಸಮಯ ದೂರವಾಗುತ್ತದೆ. ಪ್ರತಿ ಶನಿವಾರ ಕಪ್ಪು ಎಳ್ಳು ಹಾಗೂ ಕಪ್ಪು ಉದ್ದನ್ನು ಕಪ್ಪು ಬಟ್ಟೆಯಲ್ಲಿ ಕಟ್ಟಿ ಬಡವರಿಗೆ ದಾನ ನೀಡಿ. ಇದ್ರಿಂದ ಹಣದ ಸಮಸ್ಯೆ ದೂರವಾಗುತ್ತದೆ.