Select Your Language

Notifications

webdunia
webdunia
webdunia
webdunia

ಸಂಘದ ನೂತನ ಸದಸ್ಯತ್ವಕ್ಕೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ

ಸಂಘದ ನೂತನ ಸದಸ್ಯತ್ವಕ್ಕೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ
ಬಳ್ಳಾರಿ , ಶನಿವಾರ, 8 ಜೂನ್ 2019 (17:46 IST)
ಬಳ್ಳಾರಿ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ವೀರಶೈವ ವಿದ್ಯಾವರ್ಧಕ ಸಂಘದಲ್ಲಿ ನೂತನ ಸದಸ್ಯತ್ವ ನೀಡಬೇಕೆಂದು ಆಗ್ರಹಿಸಿ ಉಪವಾಸ ಸತ್ಯಾಗ್ರಹ ಮುಂದುವರಿದಿದೆ.

ಸಂಘದ ಕಚೇರಿ ಮುಂದೆ  ನೂತನ ಸದಸ್ಯತ್ವ ಹೋರಾಟ ಸಮಿತಿಯ ಕಾರ್ಯಕರ್ತರು, ಮುಖಂಡರು ನಡೆಸಿರುವ  ಉಪವಾಸ ಸತ್ಯಾಗ್ರಹ ಮೂರನೇ ದಿನಕ್ಕೆ ಕಾಲಿಟ್ಟಿದೆ.

ಹೋರಾಟ ಸಮಿತಿಯ ಸಂಚಾಲಕ ಮೀನಳ್ಳಿ ಚಂದ್ರಶೇಖರ್, ಸಂಘದ ಆಜೀವ ಸದಸ್ಯ ಮಹಾಲಿಂಗಯ್ಯ(ರಾಜಣ್ಣ)ಅಂಗಡಿ ಶಂಕರ್, ಹೊನ್ನನಗೌಡ,  ಬಿ.ಡಿ.ಗೌಡ ಮೊದಲಾದವರು ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದಾರೆ.

ಕಳೆದ ಹತ್ತು ವರ್ಷಗಳಿಂದ ನೂತನ ಸದಸ್ಯತ್ವ ನೀಡಿ ಎಂದು ಹೋರಾಟ ಮಾಡುತ್ತಾ ಬಂದರೂ ಆಡಳಿತಕ್ಕೆ ಬರುವ  ಸಂಘದ ಪದಾಧಿಕಾರಿಗಳು ಇಂದು ನಾಳೆ ಎನ್ನುತ್ತಲೇ ಬಂದಿದ್ದಾರೆ. ಈ ಕುರಿತು ಗಮನ ಹರಿಸುತ್ತಿಲ್ಲ.

ಬೈಲಾ ಪ್ರಕಾರ ಒಬ್ಬರು  ಸದಸ್ಯತ್ವ ಪಡೆಯಲು  5 ಸಾವಿರ ನೀಡಬೇಕಿದ್ದು ಅದರಂತೆ ಹೋರಾಟ ಸಮಿತಿ 334 ಜನರಿಂದ ಹಣ ಸಂಗ್ರಹಿಸಿ ಅದರ ಮೊತ್ತದ ಡಿಡಿಯನ್ನು ಸಂಘಕ್ಕೆ ನೀಡಿದೆ.

ನಾಳೆ ನಡೆಯುವ ವೀ.ವಿ.ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನೂತನ ಸದಸ್ಯತ್ವ ನೀಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ಸಮಿತಿಯು ಹಗಲು ರಾತ್ರಿ ನಿರಂತರವಾಗಿ ಉಪವಾಸ ಸತ್ಯಾಗ್ರಹ ಕೈಗೊಳ್ಳಲಿದ್ದು. ಆಗ ಸಂಭವಿಸುವ ಅನಾಹುತಗಳಿಗೆ ಸಂಘವೇ ಜವಾಬ್ದಾರಿಯಾಗಬೇಕಾಗುತ್ತದೆ ಎಂದರು.



Share this Story:

Follow Webdunia kannada

ಮುಂದಿನ ಸುದ್ದಿ

ಪರಮೇಶ್ವರ್ ವಿರುದ್ಧ ಅವಹೇಳನಕಾರಿ ಹೇಳಿಕೆ: ರಂಗನಾಥ್ ಮಾಡೋದೇನು?