Select Your Language

Notifications

webdunia
webdunia
webdunia
webdunia

ಮೂವರು ಚಿರತೆ ಬೇಟೆಗಾರರ ಬಂಧನ

ಮೂವರು ಚಿರತೆ ಬೇಟೆಗಾರರ ಬಂಧನ
ತಮಿಳುನಾಡು , ಭಾನುವಾರ, 21 ಆಗಸ್ಟ್ 2022 (21:27 IST)
ಚಿರತೆ ಭೇಟೆಯಾಡಿ ಉಗುರು ಮತ್ತು ಹಲ್ಲುಗಳನ್ನು ಸಾಗಿಸುತ್ತಿದ್ದ ಮೂವರು ಭೇಟೆಗಾರರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.  ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಜಲ್ಲಿಪಾಳ್ಯ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತಮಿಳುನಾಡು ಮೂಲದ ಜವರಯ್ಯ, ಕೆಂಪ, ತಮ್ಮಯ್ಯ ಬಂಧಿತ ಆರೋಪಿಗಳಾಗಿದ್ದಾರೆ. ಚಿರತೆ ಹಲ್ಲು, ಉಗುರುಗಳನ್ನು ಬಳಸಿ ತಾಯತ ಮಾಡಿಕೊಂಡರೆ ಒಳಿತು ಎಂಬ ಜನರ ಮೂಡನಂಬಿಕೆಯಿಂದ ಈ ಕೃತ್ಯ ಎಸಗಲಾಗ್ತಿದೆ. ಬಂಧನದ ವೇಲೆ ಓರ್ವ ಆರೋಪಿ ಪರಾರಿಯಾಗಿದ್ದು, ಆತನಿಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಬಲೆ ಬೀಸಿದ್ದಾರೆ. ಚಿರತೆ ಬೇಟೆಯಾಡಿದ ಸ್ಥಳವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಷ್ಟ್ರಧ್ವಜಕ್ಕೆ ಅಪಮಾನಮಾಡಿದ ಶಿಕ್ಷಕನ ವಿರುದ್ಧ ದೂರು