Select Your Language

Notifications

webdunia
webdunia
webdunia
webdunia

ಬ್ರೆಡ್ ತರಲು ಹೋಗಿದ್ದ ಬಾಲಕ ನಾಪತ್ತೆ..!

ಬ್ರೆಡ್ ತರಲು ಹೋಗಿದ್ದ ಬಾಲಕ ನಾಪತ್ತೆ..!
bangalore , ಭಾನುವಾರ, 21 ಆಗಸ್ಟ್ 2022 (21:12 IST)
ಬ್ರೆಡ್ ತರಲು ಅಂಗಡಿಗೆ ಹೋಗಿದ್ದ ಬಾಲಕ ನಾಪತ್ತೆಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣದ ಆಜಾದ್ ನಗರದಲ್ಲಿ ನಡೆದಿದೆ. ಅಪರಿಚಿತರು ಕಾರಿನಲ್ಲಿ ಬಂದು ಕಿಡ್ನ್ಯಾಪ್ ಮಾಡಿರುವ ಶಂಕೆ ವ್ಯಕ್ತವಾಗಿದೆ. ಅಲಿ ಇಸ್ಲಾಂ ಸಾದಾ(8) ನಾಪತ್ತೆಯಾಗಿರುವ ಬಾಲಕನಾಗಿದ್ದಾನೆ..ನಿನ್ನೆ ಸಂಜೆ ವೇಳೆ ಅಲಿ ಇಸ್ಲಾಂ ಸಾದಾಬ್ರೆಡ್ ತರಲು ಅಂಗಡಿಗೆ ಹೋಗಿದ್ದನು. ಅಂಗಡಿಗೆ ಹೋದವನು ವಾಪಸ್ ಬರದಿದ್ದರಿಂದ ಆತಂಕಗೊಂಡ ಕುಟುಂಬಸ್ಥರಿಂದ ಹುಡುಕಾಟ ನಡೆಸಿದ್ದಾರೆ..ಅಕ್ಕಪಕ್ಕದ ಮನೆಗಳ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದ ವೇಳೆ ಕಿಡ್ನ್ಯಾಪ್ ಆಗಿರುವುದು ಖಚಿತವಾಗಿದೆ.  ಬಾಲಕ ನಡೆದು ಹೋಗುವ ವೇಳೆ ಅಪರಿಚಿತರು ಕಾರಿನಲ್ಲಿ ಬಂದು ಎಳೆದೊಯ್ದಿದ್ದಾರೆ. ಸಿಸಿ ಕ್ಯಾಮೆರಾದಲ್ಲಿ ಅಪಹರಣದ ದೃಶ್ಯ ಸೆರೆಯಾಗಿದೆ.ಬಾಲಕನನ್ನ ಕಿಡ್ನ್ಯಾಪ್ ಮಾಡಿದ ಬಳಿಕ ಆಜಾದ್ ನಗರದ ಮೊದಲ ಕ್ರಾಸ್‌ನಲ್ಲಿ ಜಾಲಿ ಕಡೆಗೆ ಕಾರು ಹೋಗಿದೆ.  ಬಾಲಕನ ಕುಟುಂಬಸ್ಥರಿಂದ ಭಟ್ಕಳ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಸಂಬಂಧ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ವಿಜಯಪುರದಲ್ಲಿ ಕಂಪಿಸಿದ ಭೂಮಿ..!