Webdunia - Bharat's app for daily news and videos

Install App

ಆಹಾರ ಪೊಟ್ಟಣಗಳನ್ನು ಉಚಿತವಾಗಿ ವಿತರಣೆ - ಗೌರವ್ ಗುಪ್ತ

Webdunia
ಶನಿವಾರ, 26 ಜೂನ್ 2021 (13:57 IST)
ಬೆಂಗಳೂರು: ಅಪಾರ್ಟ್ ಮೆಂಟ್ ಸಂಘ ಸಂಸ್ಥೆಗಳು, ನಾಗರಿಕರ ಕ್ಷೇಮಾಭಿವೃದ್ಧಿ ಸಂಘಗಳು, ಕೆಲಸದ ಜಾಗಗಳಲ್ಲಿ ನಡೆಸುತ್ತಿದ್ದ ವ್ಯಾಕ್ಸಿನ್ ವಿತರಣೆ ಕಾರ್ಯಕ್ರಮಗಳು ಲಸಿಕೆ ಪೂರೈಕೆಯಿಲ್ಲದೆ ಸ್ಥಗಿತಗೊಂಡಿವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದ್ದಾರೆ.
ಇಂದು ನಗರದ ವ್ಯಾಕ್ಸಿನ್ ದಾಸ್ತಾನು ಕೇಂದ್ರವಾದ ದಾಸಪ್ಪ ಆಸ್ಪತ್ರೆ ಹಾಗೂ ಇಂದಿರಾ ಕ್ಯಾಂಟೀನ್ ನ ಉಚಿತ ಊಟ ವಿತರಣೆಯನ್ನು ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು. 
 
ಎರಡನೇ ಡೋಸ್ ಪಡೆಯುವವರಿಗೆ ಆದ್ಯತೆ
 
ನಗರದಲ್ಲಿ ಎರಡನೇ ಡೋಸ್ ಪಡೆಯುವ, 45 ವರ್ಷ ಮೇಲ್ಪಟ್ಟವರಿಗೆ ಪ್ರಮುಖ ಆದ್ಯತೆ ಕೊಟ್ಟು ವ್ಯಾಕ್ಸಿನ್ ನೀಡಲಾಗುತ್ತದೆ. ಎರಡನೇ ಡೋಸ್ ಸರೊಯಾದ ಸಮಯದಲ್ಲಿ ಸಿಗದಿದ್ದರೆ, ಮೊದಲ ಡೋಸ್ ಪಡೆದ ಪ್ರಯೋಜನವೂ ಸಿಗುವುದಿಲ್ಲ. 
ನಂತರದ ಆದ್ಯತೆ 45 ವರ್ಷ ಮೇಲ್ಪಟ್ಟವರ ಮೊದಲನೇ ಡೋಸ್ ಕೊಡಲಾಗುವುದು. ಕೊನೇಯದಾಗಿ 18 ವರ್ಷ ಮೇಲ್ಪಟ್ಟವರಿಗೆ ಆದ್ಯತೆ ಕೊಡಲಾಗುವುದು. ಈ ವರ್ಷದವರಿಗೆ ಇನ್ನು ಲಸಿಕೆ ಪೂರೈಕೆಯಾಗಿಲ್ಲ.‌ಆದ ನಂತರ ಕೊಡಲಾಗುವುದು ಎಂದು ಆಯುಕ್ತರು ತಿಳಿಸಿದರು. 
 
 
ಒಂದೊಂದು ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ 400-500 ಜನ ಲಸಿಕೆಗೆ ಬಂದ್ರೂ, 200 ಜನಕ್ಕೆ ಮಾತ್ರ ಕೊಡಲು ಸಾಧ್ಯವಾಗ್ತಿದೆ ಎಂದರು. 
 
ನಗರದಲ್ಲಿ‌ ಲಸಿಕೆ ದಾಸ್ತಾನು ಮಾಡುವ ವ್ಯವಸ್ಥೆ ಇದೆ. ಆದ್ರೆ ಪೂರೈಕೆ ಕಡಿಮೆ ಆಗಿರುವುದರಿಂದ, ಪೂರೈಕೆಗೆ ತಕ್ಕಂತೆ ವ್ಯಾಕ್ಸಿನ್ ವಿತರಣೆ ಮಾಡಲಾಗ್ತಿದೆ ಎಂದರು. ಹೀಗಾಗಿ ಎಲ್ಲರೂ ಮೊದಲೇ ನೋಂದಣಿ ಮಾಡಿಕೊಂಡು, ಸಮಯ ನಿಗದಿಯಾದ ನಂತರವೇ ಲಸಿಕೆ ಕೇಂದ್ರಗಳಿಗೆ ಬರಬೇಕು. ಇದರಿಂದ ಲಸಿಕಾ ಕೇಂದ್ರಗಳಲ್ಲಿ ಗುಂಪಾಗುವುದು ತಡೆಯಬಹುದು ಎಂದರು.
 
 ಜೊತೆಗೆ ಖಾಸಗಿ‌ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಅಭಾವ ಇದೆ. ಅಲ್ಲಿಯೂ ಅಭಾವ ತಡೆಯಬೇಕಿದೆ. ಇದೀ ರಾಜ್ಯಕ್ಕೆ 3 ಕೋಟಿ ಲಸಿಕೆ ಅಗತ್ಯವಿದ್ದು, ಬೆಂಗಳೂರಿನ ಜನಸಂಖ್ಯೆಗೆ ಬೇಕಾದಷ್ಟು ಲಸಿಕೆ ಬೇಕಾಗಬಹುದು ಎಂದು ಬೇಡಿಕೆ ಸಲ್ಲಿಸಲಾಗಿದೆ. 
ನಗರದಲ್ಲಿ ಟೆಸ್ಟಿಂಗ್ ಕಿಟ್ ಹಾಗೂ ಪ್ರಾಯೋಗಾಲಯಗಳ ಯಾವುದೇ ಕೊರತೆ ಇದೆ. ಕೋವಿಡ್ ಲಕ್ಷಣ ಇರುವವರಿಗೆ, ಪ್ರಾಥಮಿಕ ಸಂಪರ್ಕಿತರನ್ನು ತಕ್ಷಣ ಟೆಸ್ಟಿಂಗ್ ಮಾಡುವಂತೆ ಸೂಚಿಸಲಾಗಿದೆ.‌ ಟೆಸ್ಟಿಂಗ್ ಮುಂದುವರಿಸಲಾಗುತ್ತದೆ ಎಂದರು. 
 
ನಗರದಲ್ಲಿದೆ 600 ಆಂಬುಲೆನ್ಸ್  ಗಳಿವೆ. ಇದರಲ್ಲಿ ಅಡ್ವಾನ್ಸ್ ಲೈಫ್ ಸಪೋರ್ಟ್ ನ 441 ಆಂಬುಲೆನ್ಸ್ ಗಳಿವೆ ಎಂದರು. 

ದಿನಕ್ಕೆ 3 ಲಕ್ಷ ಊಟ ವಿತರಣೆ ಗುರಿ
 
ಧರ್ಮರಾಯ ಸ್ವಾಮಿ‌ ಟೆಂಪಲ್ ವಾರ್ಡ್ ನ ಇಂದಿರಾ ಕಿಚನ್ ಗೆ ಭೇಟಿ ನೀಡಿ, ಆಹಾರ ತಯಾರಿಕೆ ಗಮನಿಸಿದರು. ಅಡುಗೆ ಮನೆಯಲ್ಲಿ ಮುಖ್ಯ ಆಯುಕ್ತರು ಆಹಾರದ ರುಚಿ ನೋಡಿ, ಇದೇ ರೀತಿ ರುಚಿಯನ್ನು ನೀಡಬೇಕು ಎಂದರು. 
ನಗರದಲ್ಲಿರುವ ಎಲ್ಲಾ ಇಂದಿರಾ ಕ್ಯಾಂಟೀನ್ ಗಳಲ್ಲಿ ಬಡವರು, ವಲಸಿಗಲು, ಕೂಲಿ ಕಾರ್ಮಿಕರಿಗೆ ಬೆಳಗಿನ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟ ಸೇರಿ ದಿನದ ಮೂರು ಹೊತ್ತು ಆಹಾರ ಪೊಟ್ಟಣಗಳನ್ನು ಉಚಿತವಾಗಿ ವಿತರಣೆ ಮಾಡಲಾಗುವುದು ಎಂದು ಆಯುಕ್ತರು ಗೌರವ್ ಗುಪ್ತ  ತಿಳಿಸಿದರು.
 
 
ಲಾಕ್ ಡೌನ್ ಅವಧಿಯಲ್ಲಿ 24 ರವರೆಗೂ, ಆಹರ ಕೊಡಲಾಗುತ್ತದೆ. 3 ಪೊಟ್ಟಣ ಕೊಡಲಾಗುತ್ತದೆ, ಪಡಿತರ ಚೀಟಿ ಇದ್ರೆ ಹೆಚ್ಚೂ ಕೊಡಲಾಗುವುದು. 15 ಅಡುಗೆ ಮನೆಯಿಂದ ಆಹಾರ ಸಪ್ಲೈ ಆಗುತ್ತಿದ್ದು, ಮೂರು ಹೊತ್ತು ಊಟ, ತಿಂಡಿ ಸೇರಿ ದಿನಕ್ಕೆ 3 ಲಕ್ಷ ಕೊಡುವ ಗುರಿ ಇದೆ ಎಂದರು. 

ಚಿಕ್ಕಪೇಟೆ ವಾರ್ಡ್- 109 ಇಂದಿರಾ ಕ್ಯಾಂಟೀನ್ ಭೇಟಿ ನೀಡಿ, ಆಹಾರ ಪೊಟ್ಟಣಗಳನ್ನು ವಿತರಿಸುವುದನ್ನು ಪರಿಶೀಲಿಸಿದರು. ಗುರುತಿನ ಚೀಟಿ ತರದಿದ್ದರು ಮುಂದಿನ ಬಾರಿ ತರಲು ತಿಳಿಸಿ ಆಹಾರ ಪೊಟ್ಟಣಗಳನ್ನು ಕೊಡಲು ಸೂಚಿಸಿದರು. .

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments