Select Your Language

Notifications

webdunia
webdunia
webdunia
Saturday, 12 April 2025
webdunia

ಆ ಕಾರಣಕ್ಕೆ ಸ್ನೇಹಿತನಿಗೆ ಚಾಕು ಹಾಕಿದವನ ಕಥೆ ಹೀಗಾಯ್ತು

ಸ್ನೇಹಿತ
ಬೆಂಗಳೂರು , ಶುಕ್ರವಾರ, 16 ಆಗಸ್ಟ್ 2019 (18:30 IST)
ತನ್ನ ಸ್ನೇಹಿತನಿಗೆ ರೂಮಿನಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಈಗ ಅಂದರ್ ಆಗಿದ್ದಾನೆ.

ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ವಾಸವಿದ್ದ ರೂಮ್ ನಲ್ಲಿಯೇ ಸ್ನೇಹಿತನಿಗೆ ಚಾಕು ಇರಿದು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಬೆಂಗಳೂರು ಗ್ರಾಮಾಂತರ ಹೆಬ್ಬಗೋಡಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಹೆಬ್ಬಗೋಡಿ ಕಮ್ಮಸಂದ್ರದ ರೂಮ್ ನಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಸ್ನೇಹಿತರಾದ ಡಬ್ಲು ಪಾಸ್ವನ್ ಮತ್ತು ಮುನಿನ್ ಮಿನ್ಜ್ ನಡುವೆ ಜಗಳವಾಗಿದೆ. ಜಗಳ ವಿಕೋಪಕ್ಕೆ ಹೋದಾಗ ಮುನಿನ್ ಮಿನ್ಜ್ ತನ್ನ ಸ್ನೇಹಿತ ಡಬ್ಲು ಪಾಸ್ವನ್ ಗೆ ಚಾಕು ಇರಿದು ಅಲ್ಲಿಂದ ಎಸ್ಕೇಪ್ ಆಗಿ ತಲೆ ಮರಿಸಿಕೊಂಡಿದ್ದನು.

ಆರೋಪಿ ಜಿಗಣಿ ಬಳಿ ತಲೆ ಮರಿಸಿಕೊಂಡಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಆರೋಪಿ ಮುನಿನ್ ಮಿನ್ಜ್ ನನ್ನು ಹೆಬ್ಬಗೋಡಿ ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಏನು ಕಾರಣ?: ಒಂದೇ ಕುಟುಂಬದ 5 ಜನರಿಗೆ ಗುಂಡೇಟು