Publish Date: Tue, 14 Feb 2023 (18:59 IST)
Updated Date: Tue, 14 Feb 2023 (17:31 IST)
ಬೆಳಗಾವಿ : ಯಾವಾಗ ಯುದ್ಧ ಮಾಡಬೇಕು. ಯಾವಾಗ ಬಾಣ ಬಿಡಬೇಕು, ಆ ತರಬೇತಿ ತಗೊಂಡು ರಾಜಕಾರಣಕ್ಕೆ ಬಂದಿದ್ದೇವೆ. ಇದು ನನ್ನ ಕೊನೆಯ ಚುನಾವಣೆಯಾಗಿದೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ಗೋಕಾಕ್ನಲ್ಲಿ ಬಿಜೆಪಿ ಬೂತ್ ಅಧ್ಯಕ್ಷರು, ಪೇಜ್ ಪ್ರಮುಖರ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದ ಹಲವು ರಾಜ್ಯಗಳ ಬಿಜೆಪಿ ಮುಖ್ಯಮಂತ್ರಿಗಳು ಹಾಗೂ ಪ್ರಧಾನಿ ಗೆಲ್ಲಲು ಬೂತ್ ಮಟ್ಟದ ಅಧ್ಯಕ್ಷರು, ಪೇಜ್ ಪ್ರಮುಖರು ಕಾರಣರಾಗಿದ್ದಾರೆ.
ಅಧಿಕಾರದಲ್ಲಿ ಇವತ್ತು ನಾವು ಮುಂದುವರಿಯಲು ಬೂತ್ ಮಟ್ಟದ ಅಧ್ಯಕ್ಷರು, ಪೇಜ್ ಪ್ರಮುಖರು ಅಂತಾ ಪ್ರಧಾನಿ ಮೋದಿಯವರೇ ಹೇಳಿದ್ದಾರೆ. ನಾನು ಕಳೆದ 5 ಬಾರಿ ಕಾಂಗ್ರೆಸ್ ಪಕ್ಷದ ಶಾಸಕನಾಗಿದ್ದೆ. ನಾನು ಕಾಂಗ್ರೆಸ್ ಪಕ್ಷದ ಶಾಸಕನಾಗಿದ್ದಾಗ ನಾವ್ ನಾವೇ ಗುದ್ದಾಡುವ ಪರಿಸ್ಥಿತಿ ಇತ್ತು. ಇಂದು ಇಷ್ಟು ಜನ ಸೇರಿದ್ದೀರಿ ಎಂದರೆ 1999ರ ನನ್ನ ಚುನಾವಣೆಯ ದಾಖಲೆಯನ್ನು ಮುರಿಯುತ್ತೀರಿ ಎಂಬ ವಿಶ್ವಾಸ ವ್ಯಕ್ತಪಡಿಸಿದರು.