Select Your Language

Notifications

webdunia
webdunia
webdunia
webdunia

ಅಬ್ಬಾ …ಇದೆಂಥ ಭೀಕರ ಸಾವು

ಅಬ್ಬಾ …ಇದೆಂಥ ಭೀಕರ ಸಾವು
ಹೊನ್ನಾವರ , ಸೋಮವಾರ, 11 ಡಿಸೆಂಬರ್ 2017 (10:47 IST)
ಹೊನ್ನಾವರ: ಯುವಕ ಪರೇಶ್ ಮೇಸ್ತ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬಿ.ಜೆ.ಪಿ, ಹಾಗೂ ಹಿಂದುಪರ ಸಂಘಟನೆಗಳಿಂದ ಬಂದ್ ಗೆ ಕರೆ ನೀಡಲಾಗಿದೆ.


ಡಿ.7 ರಂದು ಹೊನ್ನಾವರದ ಶೆಟ್ಟಿಕೆರೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಪರೇಶ್ ಮೇಸ್ತ ಅವರ ಶವ ಪತ್ತೆಯಾಗಿದ್ದು, ಇದಕ್ಕೆ ಸಂಬಂಧಿಸಿದ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಇಂದು ಬಿ.ಜೆ.ಪಿ, ಹಾಗೂ ಹಿಂದುಪರ ಸಂಘಟನೆಗಳು ಬಂದ್ ಗೆ ಕರೆ ನೀಡಿದ್ದಾರೆ. ಕಾರವಾರ, ಕುಮಟಾ, ಭಟ್ಕಳ, ಮುಂಡಗೋಡ್  ಸೇರಿದಂತೆ ಹಲವೆಡೆ ಬಂದ್ ಮಾಡಬೇಕೆಂದು ಕರೆ ನೀಡಲಾಗಿದೆ.


ಶಾಲಾ, ಕಾಲೇಜುಗಳು, ಸರ್ಕಾರಿ ಕಚೇರಿಗಳು ತೆರೆದಿರುವುದಾಗಿ ಜಿಲ್ಲಾಧಿಕಾರಿ ನಕುಲ್ ಅವರು ಹೇಳಿಕೆ  ನೀಡಿದ್ದಾರೆ. ಹೊನ್ನಾವರದಲ್ಲಿ ಬಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಉಡುಪಿ ಹಾಗೂ ಮಂಗಳೂರಿನಲ್ಲೂ ಕೂಡ ಪೊಲೀಸರನ್ನು ನಿಯೋಜಿಸಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಶಾಸಕನ ಸಮ್ಮುಖದಲ್ಲೇ ನಡೆಯಿತು ಗಂಡ-ಹೆಂಡಿರ ಕಿಸ್ಸಿಂಗ್ ಸ್ಪರ್ಧೆ!