Webdunia - Bharat's app for daily news and videos

Install App

ಸನ್ಯಾಸಿ ವೇಷದಲ್ಲಿ ಬಂದು ಮಹಿಳೆಯ ಮುಖಕ್ಕೆ ನೀರು ಚಿಮುಕಿಸಿ ಚಿನ್ನ ಕದ್ದ ಕಳ್ಳರು

Webdunia
ಶುಕ್ರವಾರ, 4 ಜನವರಿ 2019 (11:58 IST)
ದಾವಣಗೆರೆ : ಸನ್ಯಾಸಿಗಳ ವೇಷದಲ್ಲಿ ಬಂದ ಕಳ್ಳರು  ಮಹಿಳೆಯ ಮುಖಕ್ಕೆ ನೀರು ಚಿಮುಕಿಸಿ ಚಿನ್ನಾಭರಣವನ್ನು ಕದ್ದು ಪರಾರಿಯಾಗಿರುವ ಘಟನೆ ಜಿಲ್ಲೆಯ ಬಿ.ಟಿ ಗಲ್ಲಿಯ ಇಸ್ಲಾಂ ಪೇಟೆಯಲ್ಲಿ ಇಂದು ನಡೆದಿದೆ.


ಚಂದನ(58) ಎಂಬ  ಮಹಿಳೆ ಇಸ್ಲಾಂ ಪೇಟೆ ಬಳಿ ಹೋಗುತ್ತಿದ್ದ ವೇಳೆ ಸನ್ಯಾಸಿಗಳ ವೇಷಧರಿಸಿ ಕಾರಿನಲ್ಲಿ ಬಂದ ಕಳ್ಳರು ಮಹಿಳೆಯನ್ನು ಅಡ್ಡ ಹಾಕಿದ್ದಾರೆ. ಬಳಿಕ ಮಹಿಳೆ ಬಳಿ ನಾವು ಹರಿದ್ವಾರದಿಂದ ಬಂದ ಸನ್ಯಾಸಿಗಳು, ನಿಮಗೆ ಒಳ್ಳೆಯದು ಮಾಡಲು ಪೂಜೆ ಮಾಡುತ್ತೇವೆ ಎಂದು ಹೇಳಿ ಮೊದಲು ನಂಬಿಸಿದ್ದಾರೆ. ನಂತರ ಮಹಿಳೆಯ ಮುಖಕ್ಕೆ ತೀರ್ಥವೆಂದು ನೀರು ಚಿಮುಕಿಸಿ ಏಕಾಏಕಿ ಆಕೆಯ ಕೊರಳಿನಲ್ಲಿದ್ದ ಚಿನ್ನದ ಸರ ಹಾಗೂ ಕೈಯಲ್ಲಿದ್ದ ಉಂಗುರವನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ.


ಘಟನೆ ಕುರಿತು ಮಹಿಳೆ ಬಸವನಗರ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಕೊಂಡಿದ್ದಾರೆ. ಮಹಿಳೆಯ 45 ಗ್ರಾಂ ಚಿನ್ನದ ಸರ ಹಾಗೂ ಕೈ ಬೆರಳಲ್ಲಿದ್ದ 3ಗ್ರಾಂ ಚಿನ್ನದ ಉಂಗುರ ಕಳ್ಳತನವಾಗಿದೆ ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments