Select Your Language

Notifications

webdunia
webdunia
webdunia
webdunia

ಸಂಸದ ಪ್ರಹ್ಲಾದ್ ಜೋಶಿ ಅವರಿಗೆ ಬೆದರಿಕೆ ಪತ್ರ; ಪತ್ರದಲ್ಲಿ ಏನಿದೆ ಗೊತ್ತಾ...?

ಸಂಸದ ಪ್ರಹ್ಲಾದ್ ಜೋಶಿ ಅವರಿಗೆ ಬೆದರಿಕೆ ಪತ್ರ; ಪತ್ರದಲ್ಲಿ ಏನಿದೆ ಗೊತ್ತಾ...?
ಧಾರವಾಡ , ಶನಿವಾರ, 3 ಫೆಬ್ರವರಿ 2018 (13:04 IST)
ಧಾರವಾಡ : ಸಿ.ಟಿ.ರವಿ ಅವರ ನಂತರ ಮತ್ತೊಬ್ಬ ಬಿಜೆಪಿ ನಾಯಕರಾದ ಸಂಸದ ಪ್ರಹ್ಲಾದ್ ಜೋಶಿ ಅವರಿಗೆ ಕಿಡಿಗೇಡಿಗಳು ಕೊಲೆ ಬೆದರಿಕೆ ಪತ್ರ ಕಳುಹಿಸಿದ್ದಾರೆ.


ಮಂಜುನಾಥ್ ಆರ್.ಡಿ.ಹೆಸರಿನಿಂದ ‘ನಿಮ್ಮನ್ನು ನೋಡಿಕೊಳ್ಳುತ್ತೇವೆ’ ಎಂದು ಬೆದರಿಕೆ ಹಾಕಿದ್ದಾರೆ. ಹಾಗೆ ‘ ವಿ.ಕೆ.ಬಾಸ್ ಬಗ್ಗೆ ತುಂಬಾ ಹಗೆತನ ಸಾಧಿಸುತ್ತಿದ್ದೀರಿ. ಯೋಗೇಶ್ ಗೌಡ ಕೊಲೆ ಕೇಸ್ ಸಿಬಿಐ ತನಿಖೆಗೆ ಒಪ್ಪಿಸಬೇಕು ಅನ್ನೋದು ಸರಿಯಲ್ಲ. ನಮ್ಮ ಬಾಸ್ ಬಗ್ಗೆ ನಾಲಿಗೆ ಹರಿಬಿಟ್ಟರೆ ಕಥೆ ಮುಗಿಸುತ್ತೇವೆ’ ಎಂದು ಪತ್ರದಲ್ಲಿ ಬರೆದು ಬೆದರಿಕೆ ಒಡ್ಡಲಾಗಿದೆ.


ಈ ಬಗ್ಗೆ ಸಂಸದ ಪ್ರಹ್ಲಾದ್ ಜೋಶಿ ಅವರು ಪೊಲೀಸ್ ಆಯುಕ್ತರಿಗೆ ಲಿಖಿತ ದೂರು ನೀಡಿದ್ದಾರೆ. ಈ ಹಿಂದೆಯೂ ಅವರಿಗೆ ಹಲವರಿಂದ ಬೆದರಿಕೆಯ ಪತ್ರ ಬಂದಿದ್ದು, ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 
 

Share this Story:

Follow Webdunia kannada

ಮುಂದಿನ ಸುದ್ದಿ

ಫೆಬ್ರವರಿ 4ರಂದು ಬೆಂಗಳೂರು ಬಂದ್ ಇಲ್ಲ; ವಾಟಾಳ್ ನಾಗರಾಜ್