Select Your Language

Notifications

webdunia
webdunia
webdunia
webdunia

ಪೊಲೀಸರ ಬೈಕ್ ಕದ್ದ ಖದೀಮನಿಗಾಗಿ ಹುಡುಕಾಟ

ಕಳ್ಳತನ
ಬೆಂಗಳೂರು , ಬುಧವಾರ, 9 ಮಾರ್ಚ್ 2022 (09:40 IST)
ಬೆಂಗಳೂರು: ನಗರದಲ್ಲಿ ಬೈಕ್ ಕಳ್ಳರ ಹಾವಳಿ ಎಷ್ಟು ಹೆಚ್ಚಾಗಿದೆ ಎಂಬುದಕ್ಕೆ ಇದೇ ಸಾಕ್ಷಿ. ಖದೀಮನೊಬ್ಬ ಪೊಲೀಸರ ಬೈಕ್ ನ್ನೇ ಕದ್ದು ಪರಾರಿಯಾಗಿದ್ದಾನೆ.

ಪೊಲೀಸ್ ಕಾನ್ಸ್ ಟೇಬಲ್ ಉಮೇಶ್ ಎಂಬವರು ಬೈಕ್ ರಸ್ತೆ ಬದಿ ನಿಲ್ಲಿಸಿ ಬ್ಯಾಂಕ್ ಗೆ ಹೋಗಿದ್ದರು. ಅವರು ಬ್ಯಾಂಕ್ ನಿಂದ ಹೊರಬರುವಷ್ಟರಲ್ಲಿ ಅವರ ಕಳ್ಳ ಬೈಕ್ ಜತೊ ಪರಾರಿಯಾಗಿದ್ದಾನೆ.

ಈ ಘಟನೆ ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದೆ. ಹೀಗಾಗಿ ಪೊಲೀಸರು ಈಗ ಸಿಸಿಟಿವಿ ದೃಶ್ಯ ಆಧರಿಸಿ ಕಳ್ಳನಿಗಾಗಿ ಹುಡುಕಾಟ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೋಲಿಸುವ ಸಾಮರ್ಥ್ಯ ಭಾರತಕ್ಕೆ ಇದೆ: ಸುಬ್ರಮಣಿಯನ್ ಸ್ವಾಮಿ