Webdunia - Bharat's app for daily news and videos

Install App

ತಪಾಸಣೆಯ ನೆಪದಲ್ಲಿ ಚಿನ್ನದ ಸರ ಕಳವು – ಆಸ್ಪತ್ರೆ ವಿರುದ್ದ ದೂರು ದಾಖಲು!

geetha
ಸೋಮವಾರ, 12 ಫೆಬ್ರವರಿ 2024 (15:29 IST)
ಬೆಂಗಳೂರು :ತಪಾಸಣೆಯ ನೆಪದಲ್ಲಿ  ಆಸ್ಪತ್ರೆ ಸಿಬ್ಬಂದಿ ನನ್ನ ಚಿನ್ನದ ಸರವನ್ನು ಕದ್ದಿದ್ದಾರೆಂದು ಆರೋಪಿಸಿ ಮಹಿಳೆಯೊಬ್ಬರು ನರ್ಸ್‌ ಹಾಗೂ ಸ್ವಚ್ಛತಾ ಸಿಬ್ಬಂದಿಗಳ ವಿರುದ್ದ ದೂರು ದಾಖಲಿಸಿದ್ದಾರೆ. ರಾಜೇಶ್ವರಿ ಚಿನ್ನದ ಆಭರಣ ಕಳೆದುಕೊಂಡಿದ್ದು, ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ನರ್ಸ್‌ ಗಳಾದ ಅಕ್ಷತಾ, ಅಧೀನ ಮತ್ತು ಸ್ವಚ್ಛತಾ ಸಿಬ್ಬಂದಿ ಪ್ರೇಮಮ್ಮ ವಿರುದ್ದ ದೂರು ದಾಖಲಾಗಿದೆ. 
 
 ರಾಜೇಶ್ವರಿ ಎದೆನೋವು ಎಂದು ಫೆ. 9 ರಂದು ಮೂಡಲ ಪಾಳ್ಯದ ಬಳಿಯಿರುವ ಶೋಭಾ ಆಸ್ಪತ್ರೆಗೆ ತೆರಳಿದ್ದರು. ಇಸಿಜಿ ಮಾಡುವಾಗ ಅವರ ಚಿನ್ನದ ಸರವನ್ನು ತೆಗೆಯಲು ಹೇಳಲಾಗಿತ್ತು. ಅದನ್ನು ತನ್ನ ಪತಿಯ ಕೈಗೆ ನೀಡುವೆನೆಂದರೂ ಸಹ ಕೇಳದೆ ಆಸ್ಪತ್ರೆಯ ಸಿಬ್ಬಂದಿ ಕೇವಲ ಐದು ನಿಮಿಷ ಅಷ್ಟೇ ಎಂದು ನೆಪ ಹೇಳಿ ದಿಂಬಿನ ಕೆಳಗೆ ಇರಿಸಲಾಗಿತ್ತು. ಬಳಿಕ ಆಸ್ಪತ್ರೆಯಲ್ಲಿಯೇ ಮರೆತು ರಾಜೇಶ್ವರಿ ಮನೆಗೆ ತೆರಳಿದ್ದರು. ಮಾರನೆ ದಿನ ಬಂದು ಕೇಳಿದಾಗ ಆಸ್ಪತ್ರೆಯ ಸಿಬ್ಬಂದಿ ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡಿದ್ದಾರೆಂದು ರಾಜೇಶ್ವರಿ ಆರೋಪಿಸಿದ್ದಾರೆ. ಗೋವಿಂದರಾಜನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments