Select Your Language

Notifications

webdunia
webdunia
webdunia
webdunia

ಪತಿಯನ್ನು ಬಿಟ್ಟು ಬಾ ಎಂದು ಪೀಡಿಸುತ್ತಿದ್ದ ವ್ಯಕ್ತಿಯ ಪ್ರಾಣವನ್ನೆ ತೆಗೆದ ಮಹಿಳೆ

ಪತಿಯನ್ನು ಬಿಟ್ಟು ಬಾ ಎಂದು ಪೀಡಿಸುತ್ತಿದ್ದ ವ್ಯಕ್ತಿಯ ಪ್ರಾಣವನ್ನೆ ತೆಗೆದ ಮಹಿಳೆ
ಮೈಸೂರು , ಸೋಮವಾರ, 18 ಫೆಬ್ರವರಿ 2019 (06:39 IST)
ಮೈಸೂರು : 21 ವರ್ಷದ ಮಹಿಳೆಯೊಬ್ಬಳು ಪತಿಯನ್ನು ಬಿಟ್ಟು ಬಾ ಎಂದು ಪೀಡಿಸುತ್ತಿದ್ದ ವ್ಯಕ್ತಿಯನ್ನು ಕೊಲೆ ಮಾಡಿದ ಘಟನೆ ಸರಗೂರು ಬಳಿಯ ಚೌಗೊಂಡನಹಳ್ಳಿಯಲ್ಲಿ ನಡೆದಿದೆ.


ಚಾಮರಾಜನಗರ ಜಿಲ್ಲೆ ಸಾಗಡೆ ಗ್ರಾಮದ ಮಹದೇವಸ್ವಾಮಿ ಮೃತ ವ್ಯಕ್ತಿಯಾಗಿದ್ದು, ಈತ ಮಹಿಳೆಯ ಮೊಬೈಲ್ ನಂಬರ್ ಪಡೆದು ಪತಿಯನ್ನು ಬಿಟ್ಟು ಬಾ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಪ್ರತಿದಿನ ಪೀಡಿಸುತ್ತಿದ್ದ. ಆತನ ಕಿರುಕುಳದಿಂದ  ಬೇಸತ್ತ ಮಹಿಳೆ ದೇವಾಲಯವೊಂದರ ಪೂಜಾರಿ ಹಾಗೂ ತಂದೆಯ ಸಹಾಯದಿಂದ ಮಹದೇವಸ್ವಾಮಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾಳೆ.


ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ದೇಶದ್ರೋಹ ಹೇಳಿಕೆ ನೀಡಿದವರ ನಾಲಿಗೆ ಕತ್ತರಿಸಬೇಕಾಗುತ್ತದೆ- ಶಾಸಕ ರಾಜುಗೌಡ ಎಚ್ಚರಿಕೆ