Select Your Language

Notifications

webdunia
webdunia
webdunia
webdunia

ಹಿಂದೂ ಸಂಪ್ರದಾಯದಂತೆ ಅಟಲ್ ಅಸ್ಥಿ ದರ್ಪಣ

ಹಿಂದೂ ಸಂಪ್ರದಾಯದಂತೆ ಅಟಲ್ ಅಸ್ಥಿ ದರ್ಪಣ
ಮಂಡ್ಯ , ಗುರುವಾರ, 23 ಆಗಸ್ಟ್ 2018 (20:04 IST)
ಮಾಜಿ ಪ್ರಧಾನಿ ಹಾಗೂ ದೇಶ ಕಂಡ ಅಪರೂಪದ ಸಜ್ಜನ ರಾಜಕಾರಣಿ, ದಿವಂಗತ ಅಟಲ್ ಬಿಹಾರಿ ವಾಜಪೇಯಿ  ವಿಧಿ ವಶರಾದ ಹಿನ್ನಲೆಯಲ್ಲಿ ಅವರ ಅಸ್ಥಿಯ ದರ್ಪಣ ಹಿಂದೂ ಸಂಪ್ರದಾಯದಂತೆ ನಡೆಯಿತು.

ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮ ಬಿಡುವ ದರ್ಪಣ ಕಾರ್ಯಕ್ರಮ ನೆರವೇರಿತು. ದೇಶದಾ ಎಲ್ಲಾ ನದಿಗಳಲ್ಲಿಯೂ ಅಟಲ್ ಅಸ್ಥಿ ಬಿಡುವ ಕಾರ್ಯ ನಡೆಯಿತು.
ಪಶ್ಚಿಮವಾಹಿನಿಯಲ್ಲಿ ಹಿಂದೂ ಸಂಪ್ರದಾಯದಂತೆ ಅಟಲ್ ಅಸ್ಥಿ ದರ್ಪಣ ನಡೆಯಿತು.

ಪಶ್ಚಿಮವಾಹಿನಿ ಬಳಿ ಭಜನೆ ಮಾಡುವ ಮೂಲಕ ಅಟಲ್ ಜೀ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥನೆ ಸಲ್ಲಿಕೆ ಮಾಡಲಾಯಿತು. ವೇದಬ್ರಹ್ಮ ಭಾನುಪ್ರಕಾಶ್ ಶರ್ಮ ನೇತೃತ್ವದಲ್ಲಿ ವಿಧಿ ವಿಧಾನಗಳು ನಡೆದವು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಅನಂತಕುಮಾರ ಸೇರಿದಂತೆ ರಾಜ್ಯದ ಬಿಜೆಪಿ ಪ್ರಮುಖರು, ಕಾರ್ಯಕರ್ತರು ಪಾಲ್ಗೊಂಡಿದ್ದರು.




Share this Story:

Follow Webdunia kannada

ಮುಂದಿನ ಸುದ್ದಿ

ಬನ್ನೇರುಘಟ್ಟ ಉದ್ಯಾನವನಕ್ಕೆ ಆಗಮಿಸಿದ ಹೊಸ ಅತಿಥಿ ಯಾರು ಗೊತ್ತಾ?