Select Your Language

Notifications

webdunia
webdunia
webdunia
webdunia

ರಾತ್ರಿ ನಿದ್ದೆ ಮಾಡದ ಮಗನ ಮೇಲೆ ಮಲತಂದೆ ಎಸಗಿದ್ದಾನೆ ಇಂತಹ ಘೋರ ಕೃತ್ಯ

ರಾತ್ರಿ ನಿದ್ದೆ ಮಾಡದ ಮಗನ ಮೇಲೆ  ಮಲತಂದೆ ಎಸಗಿದ್ದಾನೆ ಇಂತಹ ಘೋರ ಕೃತ್ಯ
ಮುಂಬೈ , ಶುಕ್ರವಾರ, 20 ಡಿಸೆಂಬರ್ 2019 (06:46 IST)
ಮುಂಬೈ : ರಾತ್ರಿ ಮಗ  ನಿದ್ದೆ ಮಾಡದೆ ಕಿರುಕುಳ ನೀಡುತ್ತಿದ್ದಾನೆ ಎಂದು ಕೋಪಗೊಂಡ ಮಲತಂದೆ ಆತನನ್ನು ಕೊಂದು ಗೋಣಿಚೀಲದಲ್ಲಿ ತುಂಬಿ ಹೂತಿಟ್ಟ ಘಟನೆ ಮುಂಬೈನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.


ಮುಂಬೈನ ಪನ್ವೇಲ್ ನ ನಿವಾಸಿ ರಾಕೇಶ್ ಅಂಬಾಜಿ ತಾಂಬ್ದೆ(32) ಕೊಲೆ ಮಾಡಿದ ಮಲತಂದೆ. ಸೂರಜ್(8 ಕೊಲೆಯಾದ ದುರ್ದೈವಿ. ಆಟೋ ಚಾಲಕನಾಗಿದ್ದ ಮಲತಂದೆ ಭಾನುವಾರ ರಾತ್ರಿ ಮನೆಗೆ ಬಂದಾಗ ಪತ್ನಿ ಮಲಗಿದ್ದಳು. ಆದರೆ ಮಗ ಮಾತ್ರ ನಿದ್ದೆ ಮಾಡದೆ ಗಲಾಟೆ ಮಾಡುತ್ತಿದ್ದ. ಇದರಿಂದ ಕೋಪಗೊಂಡ ಮಲತಂದೆ ಪತ್ನಿಗೆ ತಿಳಿಯದಂತೆ ಹೊಡೆದು ಕೊಂದು ಗೋಣಿಚೀಲದಲ್ಲಿ ತುಂಬಿ ಸ್ನೇಹಿತನ ಸಹಾಯದಿಂದ ಅದನ್ನು ನೀರ್ಜನ ಪ್ರದೇಶದಲ್ಲಿ ಹೂತಿಟ್ಟು ಬಂದಿದ್ದಾನೆ.

 

ಇತ್ತ ಮಗ ಕಾಣದೆ ಕಂಗಲಾದ ತಾಯಿ ಪೊಲೀಸರಿಗೆ ದೂರು ನೀಡಿದ ಹಿನ್ನಲೆ ಪ್ರಕರಣ ದಾಖಲಿಸಿಕೊಂಡ ಪೊಲೀರು ತನಿಖೆ ನಡೆಸಿದಾಗ ಮಲತಂದೆಯ ಕೃತ್ಯ ಬೆಳಕಿಗೆ ಬಂದಿದೆ.  ಪೊಲೀಸರು ಆರೋಪಿ ಮಲತಂದೆ ಹಾಗೂ ಆತನ ಸ್ನೇಹಿತನನ್ನು ಬಂಧಿಸಿ ಕೋರ್ಟ್ ಗೆ ಹಾಜರುಪಡಿಸಿದ್ದಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಮಾಲೀಕ ಹಾಗೂ ಆತನ ಪತ್ನಿಯ ಕಿರುಕುಳಕ್ಕೆ ಬೇಸತ್ತ ಯುವಕ ಮಾಡಿದ್ದೇನು ಗೊತ್ತಾ?