Select Your Language

Notifications

webdunia
webdunia
webdunia
webdunia

ಆಸ್ತಿ ನೀಡಲ್ಲ ಎಂದ ತಂದೆಯನ್ನೇ ಸಾಯಿಸಿದ ಮಗ

ಆಸ್ತಿ ನೀಡಲ್ಲ ಎಂದ ತಂದೆಯನ್ನೇ ಸಾಯಿಸಿದ ಮಗ
ಬಾಗಲಕೋಟೆ , ಶುಕ್ರವಾರ, 4 ಜನವರಿ 2019 (08:03 IST)
ಬಾಗಲಕೋಟೆ : ಆಸ್ತಿಗಾಗಿ ಮಗ ತಂದೆಯನ್ನೇ ಕೊಡಲಿಯಿಂದ ಬರ್ಬರವಾಗಿ ಕೊಲೆಗೈದ ಅಮಾನವೀಯ ಘಟನೆ ಜಿಲ್ಲೆಯ ಬಾದಾಮಿ ತಾಲೂಕಿನ ಹೊರವಲಯದಲ್ಲಿ ನಡೆದಿದೆ.


ಮಲ್ಲಿಕಾರ್ಜುನ(65) ಮೃತ ತಂದೆ. ಶರಣಪ್ಪ ತಂದೆಯನ್ನು ಕೊಂದ ಪಾಪಿ ಮಗ. ಆಸ್ತಿ ವಿಚಾರಕ್ಕೆ ಆಗಾಗ ತಂದೆ ಹಾಗೂ ಮಗನ ನಡುವೆ ಜಗಳವಾಗುತ್ತಿತ್ತು. ಆದರೆ ಗುರುವಾರದಂದು ಜಗಳವಾದಾಗ ತಂದೆ ಮಗನಿಗೆ ಆಸ್ತಿ ನೀಡಲ್ಲ ಎಂದು ಹೇಳಿದ್ದಾರೆ.


ಇದರಿಂದ ಕೋಪಗೊಂಡ ಮಗ ಸಿಲಿಂಡರ್ ಹಾಗೂ ಕೊಡಲಿಯಿಂದ ತಂದೆಯ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿ ಮೇಲೆ ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

Share this Story:

Follow Webdunia kannada

ಮುಂದಿನ ಸುದ್ದಿ

ಯುವತಿ ಬಾತ್‍ರೂಮಿನಲ್ಲಿ ಸ್ನಾನ ಮಾಡುತ್ತಿದ್ದಾಗ ಟೆರೆಸ್ ಮೇಲೆ ನಿಂತ ವ್ಯಕ್ತಿ ಮಾಡಿದ್ದೇನು ಗೊತ್ತಾ?