Select Your Language

Notifications

webdunia
webdunia
webdunia
webdunia

ಆಯತಪ್ಪಿ ಬಾವಿಗೆ ಬಿದ್ದ ಹೋರಿ ರಕ್ಷಣೆ

ಆಯತಪ್ಪಿ ಬಾವಿಗೆ ಬಿದ್ದ ಹೋರಿ ರಕ್ಷಣೆ
bangalore , ಭಾನುವಾರ, 20 ಮಾರ್ಚ್ 2022 (18:31 IST)
ಆಯತಪ್ಪಿ ಬಾವಿಗೆ ಬಿದ್ದ ಹೋರಿಯನ್ನು ಅಗ್ನಿಶಾಮಕದಳ ರಕ್ಷಿಸಿದ್ದಾರೆ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕಿರಣಗಿ ಗ್ರಾಮ ಹೊರವಲಯದಲ್ಲಿ 40 ಅಡಿ ಆಳದ ಬಾವಿಗೆ ಹೋರಿ ಬಿದ್ದಿದೆ. ಕಿರಣಗಿ ಗ್ರಾಮದ ರೈತ ಬಸಪ್ಪ ಎಂಬುವವರ ಹೋರಿ ಆಯತಪ್ಪಿ ಬಾವಿಗೆ ಬಿದ್ದಿತ್ತು.
ತಕ್ಷಣ ಗ್ರಾಮಸ್ಥರು ಅಥಣಿ ಅಗ್ನಿಶಾಮಕ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ತಕ್ಷಣ  ಅಥಣಿ ಅಗ್ನಿಶಾಮಕ ಠಾಣೆ ಅಧಿಕಾರಿ ರಾಜು ತಳವಾರ ಕಾರ್ಯಪ್ರವೃತ್ತರಾಗಿದ್ದಾರೆ. ಗ್ರಾಮಸ್ಥರ ಸಹಾಯದಿಂದ ಸತತ ಮೂರು ಗಂಟೆ ಕಾಲ ಕಾರ್ಯಾಚರಣೆ ಮೂಲಕ ಬಾವಿಗೆ ಬಿದ್ದಿದ್ದ ಹೋರಿಯನ್ನ ಹೊರ ತೆಗೆಯಲಾಗಿದೆ. ಬಾವಿಯಲ್ಲಿ ನೀರು ಇದ್ದಿದ್ದರಿಂದ ಹೋರಿಗೆ ಯಾವುದೇ ರೀತಿ ಅಪಾಯ ಆಗಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಪಿಸ್ತೂಲ್ ಸ್ಮಗ್ಲರ್ ಬಂಧನ