Publish Date: Wed, 17 May 2023 (16:16 IST)
Updated Date: Wed, 17 May 2023 (17:10 IST)
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವಿನ ಕುರ್ಚಿ ಕದನ ಇನ್ನು ಅಂತಿಮ ಹಂತಕ್ಕೆ ಬಂದಿಲ್ಲ...ಇತ್ತ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಸಿದ್ದತೆಗಳು ಸ್ಥಗಿತಗೊಂಡಿವೆ. .ನಾಳೆ ಸಿದ್ದರಾಮಯ್ಯನವರು ಸಿಎಂ ಅಂತನೇ ಹೇಳಲಾಗ್ತಿತ್ತು..ಬೆಳಗ್ಗೆಯಿಂದ ಕಂಠೀರವ ಕ್ರೀಡಾಂಗಣಕ್ಕೆ ಆಗಮಿಸಿ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ಕೊಟ್ಟು ಪರಿಶೀಲನೆಯನ್ನೂ ಮಾಡಿದ್ರು.. ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ವಿಶೇಷ ಸಂಚಾರಿ ಆಯುಕ್ತ ಸಲೀಂ, ಜಂಟಿ ಪೊಲೀಸ್ ಆಯುಕ್ತ ಅನುಚೇತ್, ವಿವಿಐಪಿ ವಿಭಾಗದ ಡಿಸಿಪಿ ಮಂಜುನಾಥ ಬಾಬು ಪರಿಶೀಲನೆ ನಡೆಸಿದ್ರು.. ನಾಳೆ ಮಧ್ಯಾಹ್ನ 3.30ಕ್ಕೆ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ತಲಾಗಿತ್ತು..ಆದ್ರೆ ಅನಿನಿರೀಕ್ಷಿತ ಬೆಳವಣಿಗೆಯಿಂದ ಕರ್ನಾಟಕ ಸಿಎಂ ಆಯ್ಕೆ ಇನ್ನು ಕಗ್ಗಾಂಟಾಗೇ ಉಳಿದಿದೆ