Select Your Language

Notifications

webdunia
webdunia
webdunia
webdunia

ಗುಡಿಸಲಿಗೆ ಬಿದ್ದ ಬೆಂಕಿಗೆ ಅಡಿಕೆ ತೋಟ ಸುಟ್ಟಿತು...

ಗುಡಿಸಲಿಗೆ ಬಿದ್ದ ಬೆಂಕಿಗೆ ಅಡಿಕೆ ತೋಟ ಸುಟ್ಟಿತು...
ತುಮಕೂರು , ಶನಿವಾರ, 16 ಮಾರ್ಚ್ 2019 (13:43 IST)
ಆಕಸ್ಮಿಕ ಬೆಂಕಿಗೆ ಆರು ಗುಡಿಸಲುಗಳು ಸುಟ್ಟು ಭಸ್ಮವಾಗಿರುವ ಘಟನೆ ನಡೆದಿದ್ದು, ಅಡಿಕೆ ತೋಟಕ್ಕೂ ಬೆಂಕಿ ವ್ಯಾಪಿಸಿ ನಷ್ಟ ಸಂಭವಿಸಿದೆ.

ಆರು ಗುಡಿಸಲಿಗೆ ಆಕಸ್ಮಿಕ ಬೆಂಕಿ ತಗುಲಿದೆ. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಚಿತ್ರದೇವರ ಹಟ್ಟಿಯಲ್ಲಿ ಈ ಘಟನೆ ನಡೆದಿದೆ. ಮೊದಲು ಗುಡಿಸಲಿಗೆ ಬಿದ್ದ ಬೆಂಕಿ ಬಳಿಕ ಅಡಿಕೆ ತೋಟಕ್ಕೆ ವ್ಯಾಪಿಸಿದೆ. ಇದರಿಂದಾಗಿ ಅಪಾರ ನಷ್ಟ ಸಂಭವಿಸಿದೆ.

150 ಕ್ಕೂ ಹೆಚ್ಚು ಅಡಿಕೆ ಮರಗಳು ಬೆಂಕಿಗೆ ಆಹುತಿಯಾಗಿವೆ. ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕ ದಳ ಹಾಗೂ ಸ್ಥಳೀಯರು ಬೆಂಕಿ ನಂದಿಸುವಲ್ಲಿ ಶ್ರಮಿಸಿದರು.  

  


Share this Story:

Follow Webdunia kannada

ಮುಂದಿನ ಸುದ್ದಿ

ಅತೀ ಭ್ರಷ್ಟರಲ್ಲಿ ಡಿಕೆಶಿವಕುಮಾರ್ ಉನ್ನತ ಸ್ಥಾನ ಹೊಂದಿದ್ದಾರೆ; ಆರೋಪ