Select Your Language

Notifications

webdunia
webdunia
webdunia
webdunia

ಬಿಎಸ್ವೈ ಪ್ರಾರ್ಥನೆಗೆ ದೇವರು ಒಲಿಯುತ್ತಿಲ್ಲ ಎಂದ ಸಚಿವರಾರು ಗೊತ್ತಾ?

ಬಿಎಸ್ವೈ ಪ್ರಾರ್ಥನೆಗೆ ದೇವರು ಒಲಿಯುತ್ತಿಲ್ಲ ಎಂದ ಸಚಿವರಾರು ಗೊತ್ತಾ?
ಬಳ್ಳಾರಿ , ಭಾನುವಾರ, 28 ಅಕ್ಟೋಬರ್ 2018 (16:05 IST)
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ದೇವಸ್ಥಾನಗಳಿಗೆ ಅಲೆದಾಡುತ್ತಿದ್ದಾರೆ. ಆದರೆ ದೇವರು ಅವರ ಬೇಡಿಕೆಗೆ ತಥಾಸ್ತು ಎನ್ನುತ್ತಿಲ್ಲ ಎಂದು ಲೋಕೋಪಯೋಗಿ ಸಚಿವ ಹೇಳಿದ್ದಾರೆ.

ರಾಜ್ಯದಲ್ಲಿರುವ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರಕಾರವನ್ನು ಅಸ್ತಿರಗೊಳಿಸಲು ಬಿ.ಎಸ್.ಯಡಿಯೂರಪ್ಪ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಆದರೆ ದೇವರ ಅವರ ಬೇಡಿಕೆ ಈಡೇರಿಸುತ್ತಿಲ್ಲ ಎಂದು ಸಚಿವ ಹೆಚ್.ಡಿ.ರೇವಣ್ಣ ಹೇಳಿದ್ದಾರೆ.

ಬಳ್ಳಾರಿಯಲ್ಲಿ ಮಾತನಾಡಿದ ಅವರು, ರಾಜ್ಯದ ಅನೇಕ ದೇವಸ್ಥಾನಗಳಿಗೆ ಕುಮಾರಸ್ವಾಮಿ, ದೇವೇಗೌಡರು, ನಾನು ಹೋಗುತ್ತಿದ್ದೇವೆ. ನಾವು ದೇವರನ್ನು ರಾಜ್ಯದ ಅಭಿವೃದ್ಧಿಗೆ ಶಕ್ತಿ ಕೊಡಿ ಎಂದು ಕೇಳುತ್ತೇವೆ. ಆದರೆ ಬಿಎಸ್ ವೈ ಸರಕಾರ ಬೀಳಿಸಲು ದೇವಾಲಯಗಳಲ್ಲಿ ಮನವಿ ಮಾಡುತ್ತಿದ್ದಾರೆ ಎಂದು ಟೀಕೆ ಮಾಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಹಳೆ ನೋಟು ಬದಲಾಯಿಸುವ ಜಾಲ ಪತ್ತೆ