Select Your Language

Notifications

webdunia
webdunia
webdunia
webdunia

ಪಾಕ್ ಜತೆ ಯುದ್ಧ ನಡೆಯೋದು ಬೇಡವೇ ಬೇಡ ಎಂದ ಸಚಿವ

ಪಾಕ್ ಜತೆ ಯುದ್ಧ ನಡೆಯೋದು ಬೇಡವೇ ಬೇಡ ಎಂದ ಸಚಿವ
ವಿಜಯಪುರ , ಗುರುವಾರ, 28 ಫೆಬ್ರವರಿ 2019 (17:53 IST)
ಭಾರತ ಹಾಗೂ ಪಾಕ್ ಗಡಿಯಲ್ಲಿ ಯುದ್ಧದ ಸನ್ನಿವೇಶ ನಿರ್ಮಾಣವಾಗಿದೆ. ಆದರೆ ಯುದ್ಧ ನಡೆಯೋದು ಬೇಡ ಎಂದು ಸಚಿವರೊಬ್ಬರು ಹೇಳಿದ್ದಾರೆ.

ಪಾಕಿಸ್ತಾನ ಹಾಗೂ ಭಾರತದ ನಡುವೆ ಯುದ್ಧ ನಡೆಯೋದು ಬೇಡ ಅಂತ ತೋಟಗಾರಿಕಾ ಸಚಿವ ಎಂ. ಸಿ. ಮನಗೂಳಿ ಹೇಳಿಕೆ ನೀಡಿದ್ದಾರೆ.

ನಿನ್ನೆಯಷ್ಟೇ ಉಗ್ರರ ಮೇಲೆ ದಾಳಿ ಮಾಡಬಾರದು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಮನಗೂಳಿ ಈಗ ಪಾಕ್ ಜೊತೆಗೆ ಯುದ್ಧ ಬೇಡವೆಂದು ವಿಜಯಪುರದಲ್ಲಿ ಹೇಳಿಕೆ ನೀಡಿದ್ದಾರೆ.

ಯುದ್ಧ ನಡೆದರೇ ಅನಾಹುತವಾಗುತ್ತೆ. ಪಾಕ್ ಜೊತೆಗಿನ ಯುದ್ಧದಿಂದ ದೇಶಕ್ಕೆ ಅನಾಹುತ ಆಗಲಿದೆ ಎಂದೂ ಹೇಳಿಕೆ ನೀಡಿದ್ದಾರೆ. ವಿವಾದಾತ್ಮಕ ಹೇಳಿಕೆ ಬಗ್ಗೆಯೂ ಸಮರ್ಥನೆ ಮಾಡಿಕೊಂಡ ಮನಗೂಳಿ, ಕಾರ್ ನಲ್ಲಿ ಕುಳಿತಾಗ ಮಾಧ್ಯಮದವರು ಕೇಳಿದ ಪ್ರಶ್ನೆ ಏನು ಅಂತ ಗೊತ್ತಾಗಲಿಲ್ಲ. ನಾನು ಏನು ಹೇಳಿದೆ ಅನ್ನೋದು ಅವರಿಗೆ ತಿಳಿಯಲಿಲ್ಲ.
ನನ್ನ ಹೇಳಿಕೆ ತಿರುಚಲಾಗಿದೆ ಎಂದಿದ್ದಾರೆ.

ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ದಾಳಿ‌ ಮಾಡಿದ್ದು ಸರಿಯಲ್ಲ ಎಂದು ಬಾಗಲಕೋಟೆಯಲ್ಲಿ ಹೇಳಿದ್ದರು ಸಚಿವ ಮನಗೂಳಿ.




Share this Story:

Follow Webdunia kannada

ಮುಂದಿನ ಸುದ್ದಿ

ಪಕ್ಷದ ತೀರ್ಮಾನ ಮುಖ್ಯವಲ್ಲ ಅಂತ ಸುಮಲತಾ ಬಾಂಬ್ ಸಿಡಿಸಿದ್ಯಾಕೆ?