Select Your Language

Notifications

webdunia
webdunia
webdunia
webdunia

ಮತಾಂತರವಾಗಲಿಲ್ಲ ಎಂದು ಪತ್ನಿಯನ್ನೇ ಕೊಲ್ಲಲು ಮುಂದಾದ ಪತಿ!

ಮತಾಂತರವಾಗಲಿಲ್ಲ ಎಂದು ಪತ್ನಿಯನ್ನೇ ಕೊಲ್ಲಲು ಮುಂದಾದ ಪತಿ!
ಚಿತ್ರದುರ್ಗ , ಶುಕ್ರವಾರ, 18 ನವೆಂಬರ್ 2022 (13:15 IST)
ಚಿತ್ರದುರ್ಗ : ಎಲ್ಲೆಡೆ ಧರ್ಮಸಂಘರ್ಷ ತಾರಕಕ್ಕೇರಿದೆ. ಇಂತಹ ವೇಳೆ ಪ್ರೀತಿಸಿ ಮದುವೆಯಾಗಿದ್ದ ಹೆಂಡತಿ ಮತಾಂತರವಾಗಲಿಲ್ಲ ಎಂಬ ಕಾರಣಕ್ಕೆ ಗಂಡನೇ ಕೊಲೆ ಮಾಡಲು ಯತ್ನಿಸಿರುವ ಹೃದಯವಿದ್ರಾವಕ ಘಟನೆ ಚಿತ್ರದುರ್ಗದಲ್ಲಿ ಬೆಳಕಿಗೆ ಬಂದಿದೆ.

ಆರೋಪಿ ಖಾದರ್ ಶಿವಮೊಗ್ಗ ಮೂಲದ ಉಮಾರನ್ನು ಮೊದಲೇ ವಿವಾಹವಾಗಿದ್ದ. ಚಿತ್ರದುರ್ಗದ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಉಮಾ ಅವರಿಗೆ ಖಾದರ್ ಪರಿಚಯವಾಗಿದೆ.

ಆ ಪರಿಚಯ ಪ್ರೀತಿಯಾಗಿ ವಿವಾಹವಾಗಿದ್ದರು. ವಿವಾಹದ ಬಳಿಕ ಆತನ ವರಸೆ ಬದಲಾಗಿದ್ದು, ಹೆಂಡತಿಯನ್ನು ಮತಾಂತರವಾಗುವಂತೆ ಒತ್ತಾಯಿಸಿದ್ದನು. ಆಗ ಈ ಒತ್ತಡಕ್ಕೊಳಗಾದ ಉಮಾಳ ಆರೋಗ್ಯ ಹದಗೆಟ್ಟಿದ್ದು, ಎರಡು ಕಾಲುಗಳು ನಿಷ್ಕ್ರಿಯಗೊಂಡಿದ್ದವು.

ಈ ವೇಳೆ ತನ್ನ ಪತ್ನಿಯ ಬಗ್ಗೆ ಕಾಳಜಿವಹಿಸಬೇಕಾದ ಖಾದರ್, ಉಮಾಗೆ ಚಿತ್ರಹಿಂಸೆ ನೀಡಿ, ಆಕೆಯ ಖಾಸಗಿ ಅಂಗಾಂಗಾಗಳ ಹಲ್ಲೆ ನಡೆಸಿ, ಕ್ರೌರ್ಯ ಮೆರೆದಿದ್ದಾನೆ.

ಅಲ್ಲದೇ ಇಸ್ಲಾಂ ಧರ್ಮಕ್ಕೆ ಮತಾಂತರವಾಗದಿದ್ದರೆ ಕೊಲ್ಲುವುದಾಗಿ ಬೆದರಿಕೆಯೊಡ್ಡಿದ್ದಾನೆ. ಯಾರು ಇಲ್ಲದ ವೇಳೆ ಉಮಾಳನ್ನು ಉಸಿರುಗಟ್ಟಿಸಿ ಹತ್ಯೆ ಮಾಡಲು ಖಾದರ್ ಯತ್ನಿಸಿದ್ದಾನೆ ಎಂದು ಉಮಾ ಆರೋಪಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಿಬಿರದಲ್ಲಿ ಭೀಕರ ಅಗ್ನಿ ಅವಘಡ ! 7 ಮಕ್ಕಳು ಸೇರಿ 21 ಸಾವು