Select Your Language

Notifications

webdunia
webdunia
webdunia
Wednesday, 23 April 2025
webdunia

ಎಫ್ ಎಲ್ ಸಿ ತನಿಖೆ ನಂತರ ಕಾರಣ ಬಹಿರಂಗ ಮಾಡುವೆ ಎಂದ ಗೃಹ ಸಚಿವ

ಎಫ್ ಎಲ್ ಸಿ
ಹುಬ್ಬಳ್ಳಿ , ಶನಿವಾರ, 26 ಅಕ್ಟೋಬರ್ 2019 (19:26 IST)
ಹುಬ್ಬಳ್ಳಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ ಎಲ್ ಸಿ ರಿಪೋರ್ಟ್ ಬರುವವರೆಗೆ ಯಾವುದೇ ಮಾಹಿತಿ ಬಹಿರಂಗಗೊಳಿಸಲು ಬರುವುದಿಲ್ಲ.

ಹೀಗಂತ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ ಎಲ್ ಸಿ ಮಾಡಲಾಗುತ್ತಿದ್ದು, ಅದರ ರಿಪೋರ್ಟ್ ಶೀಘ್ರದಲ್ಲೇ ಬರಲಿದೆ. ರಿಪೋರ್ಟ್ ಬಂದ ನಂತರ ಸಂಪೂರ್ಣ ಮಾಹಿತಿ ಒದಗಿಸಲಾಗುವುದು.

ಇದೀಗ ಯಾವುದೇ ಮಾಹಿತಿ ಒದಗಿಸುವ ಪರಿಸ್ಥಿತಿಯಲ್ಲಿಲ್ಲ.  ತನಿಖೆಗೆ ತೊಂದರೆ ಆಗುತ್ತೆ. ಹುಬ್ಬಳ್ಳಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರ ಮತ್ತು ಮಹಾರಾಷ್ಟ್ರ ಪೊಲೀಸ್ ಸಹಾಯ ಪಡೆಯಲಾಗುತ್ತಿದ್ದು, ಅವರ ಸಂಪರ್ಕದಲ್ಲಿ ಇರಲಾಗಿದೆ. ಅವರಿಂದ ಬಾಂಬ್ ವಸ್ತುಗಳು ಎಲ್ಲಿಂದ ಬಂದವು ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದರು.



Share this Story:

Follow Webdunia kannada

ಮುಂದಿನ ಸುದ್ದಿ

ಬೈ ಎಲೆಕ್ಷನ್ ಗೆ ಬಿಜೆಪಿ ಸಿದ್ಧತೆ ಜೋರು