Select Your Language

Notifications

webdunia
webdunia
webdunia
webdunia

ಎರಡು ಬಾರಿಯೂ ತಮ್ಮ ಸೂಚನೆಗೆ ಕ್ಯಾರೇ ಎನ್ನದ ಸಿಎಂ ವಿರುದ್ಧ ರಾಜ್ಯಪಾಲರಿಂದ ಕೇಂದ್ರಕ್ಕೆ ವರದಿ

ಎರಡು ಬಾರಿಯೂ ತಮ್ಮ ಸೂಚನೆಗೆ ಕ್ಯಾರೇ ಎನ್ನದ ಸಿಎಂ ವಿರುದ್ಧ ರಾಜ್ಯಪಾಲರಿಂದ ಕೇಂದ್ರಕ್ಕೆ ವರದಿ
ಬೆಂಗಳೂರು , ಶನಿವಾರ, 20 ಜುಲೈ 2019 (10:26 IST)
ಬೆಂಗಳೂರು: ವಿಶ್ವಾಸ ಮತ ಯಾಚನೆಗೆ ನಿನ್ನೆಎರಡು ಬಾರಿ ಗಡುವು ವಿಧಿಸಿದ್ದರೂ ಮೀರಿ ನಡೆದ ಸಿಎಂ ಕುಮಾರಸ್ವಾಮಿ ಮತ್ತು ರಾಜ್ಯದ ಮೈತ್ರಿ ಸರ್ಕಾರದ ವಿರುದ್ಧ ರಾಜ್ಯಪಾಲ ವಜುಬಾಯ್ ವಾಲಾ ಕೇಂದ್ರಕ್ಕೆ ವರದಿ ಸಲ್ಲಿಸುವ ಸಾಧ್ಯತೆಯಿದೆ.


ನಿನ್ನೆ ಮಧ್ಯಾಹ್ನ 1.30 ರ ಗಡುವು ದಾಟಿದಾಗ ಮತ್ತೆ ಸಿಎಂಗೆ ಸೂಚನೆ ರವಾನಿಸಿದ್ದ ರಾಜ್ಯಪಾಲರು ಸಂಜೆ 6 ಗಂಟೆಗೆ ವಿಶ್ವಾಸ ಮತ ಸಾಬೀತುಪಡಿಸಲು ಸೂಚಿಸಿದ್ದರು. ಆದರೆ ಅದನ್ನೂ ಮೀರಲಾಗಿದೆ. ಹೀಗಾಗಿ ರಾಜ್ಯಪಾಲರು ಕೇಂದ್ರಕ್ಕೆ ಮಧ್ಯಂತರ ವರದಿ ಸಲ್ಲಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಇಂದು ಪ್ರಧಾನಿ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಈ ವಿಚಾರ ಎದುರಾಗಬಹುದಾಗಿದೆ. ಈ ವರದಿಯನ್ವಯ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾದರೂ ಅಚ್ಚರಿಯಿಲ್ಲ. ಆದರೆ ಸೋಮವಾರ ವಿಶ್ವಾಸ ಮತ ಯಾಚನೆ ಮಾಡುವುದಾಗಿ ಹೇಳಿರುವುದರಿಂದ ಸದ್ಯಕ್ಕೆ ಕೇಂದ್ರ ಕಾದು ನೋಡುವ ತಂತ್ರ ಅನುಸರಿಸಲೂಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಹೊರ ಹೋಗಿರುವ ಶಾಸಕರಿಗೆ ತಕ್ಷಣ ರೆಸಾರ್ಟ್ ಗೆ ಮರಳಲು ಸೂಚಿಸಿದ ಬಿಎಸ್ ವೈ