Select Your Language

Notifications

webdunia
webdunia
webdunia
webdunia

ಮಧ್ಯಂತರ ರಕ್ಷಣೆ ಕೋರಿ ಡಿಕೆಶಿ ಸಲ್ಲಿಸಿದ ಅರ್ಜಿಯನ್ನ ತಿರಸ್ಕರಿಸಿದ ಹೈಕೋರ್ಟ್

ಮಧ್ಯಂತರ ರಕ್ಷಣೆ ಕೋರಿ ಡಿಕೆಶಿ ಸಲ್ಲಿಸಿದ ಅರ್ಜಿಯನ್ನ ತಿರಸ್ಕರಿಸಿದ ಹೈಕೋರ್ಟ್
ಬೆಂಗಳೂರು , ಶುಕ್ರವಾರ, 30 ಆಗಸ್ಟ್ 2019 (14:11 IST)
ಬೆಂಗಳೂರು : ಮಧ್ಯಂತರ ರಕ್ಷಣೆ ಕೋರಿ ಡಿಕೆಶಿ ಪರ ವಕೀಲರು ಹೈಕೋರ್ಟ್ ಗೆ ಸಲ್ಲಿಸಿದ ತುರ್ತು ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ.




ಡಿಕೆಶಿಗೆ ಜಾರಿ ನಿರ್ದೇಶನಾಲಯ(ಇಡಿ) ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದೆ. ಈ ಬೆನ್ನಲ್ಲೇ ಇದೀಗ ಡಿಕೆಶಿ ಪರ ವಕೀಲರು ಇಡಿ ತಕ್ಷಣ ಬಂಧಿಸದಂತೆ ಮಧ್ಯಂತರ ತಡೆಗೆ  ಕೋರಿ ಹೈಕೋರ್ಟಿಗೆ ತುರ್ತು ಅರ್ಜಿ ಸಲ್ಲಿಸಿದ್ದಾರೆ. ಇಂದು ಈ ತುರ್ತು ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್,  ಪ್ರಕರಣದ ಎಲ್ಲಾ ಅಂಶ ಪರಿಗಣಿಸಿ ನಿನ್ನೆ ತೀರ್ಪು ನೀಡಲಾಗಿದೆ. ಈಗ ಅದನ್ನ ತಿದ್ದುಪಡಿ ಮಾಡಲು ಸಾಧ್ಯವಿಲ್ಲ ಎಂದು ಅರ್ಜಿಯನ್ನು ವಜಾಗೊಳಿಸಿದೆ.


ಈ ಹಿನ್ನಲೆಯಲ್ಲಿ, ಡಿಕೆಶಿವಕುಮಾರ್ ವಿಚಾರಣೆಗೆ ತೆರಳಿದಾಗ ಅವಶ್ಯ ಬಿದ್ದರೆ ಇಡಿ ಬಂಧಿಸುವ ಸಾಧ್ಯತೆ ಇದ್ದು, ಆದಕಾರಣ ಇದೀಗ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರಿಗೆ ಇಡಿ ಬಂಧನ ಭೀತಿ ಎದುರಾಗಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಿಕೆ ಶಿವಕುಮಾರ್​ ಉಪ್ಪು ತಿಂದಿದ್ದರೆ ನೀರು ಕುಡಿಯುತ್ತಾರೆ- ಶ್ರೀರಾಮುಲು ಟಾಂಗ್