Publish Date: Mon, 30 Dec 2019 (18:10 IST)
Updated Date: Mon, 30 Dec 2019 (18:12 IST)
ವಿಶ್ವಮಾನವ ಸಂದೇಶದೊಂದಿಗೆ ಜಗದ ಕವಿ, ರಾಷ್ಟ್ರಕವಿ ಕುವೆಂಪು ರಥ ಅದ್ಭುತವಾಗಿ ಸಾಗಿ ಬಂದು ನೋಡುಗರ ಗಮನ ಸೆಳೆದಿದೆ.
ರಸಋಷಿಯ ಹಾಡುಗಳ ಮೂಲಕ ಮಂಡ್ಯದ ನಾಗಮಂಗಲ ಪಟ್ಟಣದಲ್ಲಿ ಅದ್ಧೂರಿಯಾಗಿ ಕುವೆಂಪು ರಥದ ಮೆರೆವಣಿಗೆ ಮಾಡಲಾಯಿತು.
ನಾಗಮಂಗಲದ ಕುವೆಂಪು ಶಾಲೆಯಲ್ಲಿ ರಾಷ್ಟ್ರಕವಿಯ ಜನ್ಮದಿನಾಚರಣೆಯ ಅಂಗವಾಗಿ ಕುವೆಂಪು ರಥ ಭವ್ಯ ಮೆರವಣಿಗೆಯಲ್ಲಿ ಸಾಗಿತು. ಶಾಲೆಯ ನೂರಾರು ಮಕ್ಕಳ ವಾದ್ಯದೊಂದಿಗೆ ಪಟ್ಟಣದಲ್ಲಿ ರಥ ಸಾಗಿತು.
ಮೆರವಣಿಗೆಯಲ್ಲಿ ಶಾಲೆಯ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು, ನಾಗರಿಕರು ಭಾಗವಹಿಸಿದ್ದರು.