Select Your Language

Notifications

webdunia
webdunia
webdunia
webdunia

ಪ್ರೇಯಸಿಗೆ ಮತ್ತೊಬ್ಬನ ಜೊತೆ ಅನೈತಿಕ ಸಂಬಂಧ, ಹತ್ಯೆಯಾದ ಪ್ರಿಯಕರ!

ಪ್ರೇಯಸಿಗೆ ಮತ್ತೊಬ್ಬನ ಜೊತೆ ಅನೈತಿಕ ಸಂಬಂಧ, ಹತ್ಯೆಯಾದ ಪ್ರಿಯಕರ!
ಬೆಂಗಳೂರು , ಮಂಗಳವಾರ, 11 ಅಕ್ಟೋಬರ್ 2022 (09:55 IST)
ಬೆಂಗಳೂರು : ಕೆಲ ದಿನಗಳ ಹಿಂದೆ ನಡೆದಿದ್ದ ವೈದ್ಯ ವಿಕಾಸ್ ಕೊಲೆಗೀಗ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಪ್ರಿಯತಮೆಯ ಅನೈತಿಕ ಸಂಬಂಧವನ್ನು ಪ್ರಶ್ನೆ ಮಾಡಿದ್ದಕ್ಕೆ ಡಾಕ್ಟರ್ನ್ನು ಹತ್ಯೆ ಮಾಡಲಾಗಿದೆ ಎಂಬ ವಿಷಯ ಬಯಲಾಗಿದೆ.

ಕಳೆದ ಸೆಪ್ಟೆಂಬರ್ 19ರಂದು ಬೆಂಗಳೂರಿನ ಬೇಗೂರಿನ ನ್ಯೂ ಮೈಕೋಲೇಔಟ್ನಲ್ಲಿ ವೈದ್ಯನಾಗಿದ್ದ ವಿಕಾಸ್ ಎನ್ನುವ ಯುವಕನ ಬರ್ಬರ ಕೊಲೆಯಾಗಿತ್ತು. ಚೆನ್ನೈ ಮೂಲದ ವೈದ್ಯ ವಿಕಾಸ್ ಅರ್ಕೆಟಿಕ್ಟ್ ಆಗಿರುವ ಪ್ರತಿಭಾ ಪರಸ್ಪರ ಪ್ರೀತಿಸುತ್ತಿದ್ದರು.

ಎರಡು ಮನೆ ಕಡೆಯವರು ಒಪ್ಪಿ ಮದುವೆಗೆ ಡೇಟ್ ಕೂಡ ಫಿಕ್ಸ್ ಆಗುವುದರಲ್ಲಿತ್ತು. ಅಷ್ಟರಲ್ಲಿ ವೈದ್ಯ ವಿಕಾಸ್ ತನ್ನ ಪ್ರಿಯತಮೆ ಪ್ರತಿಭಾ ಜೊತೆಗಿದ್ದ ಖಾಸಗಿ ವೀಡಿಯೋವನ್ನು ಸೋಷಿಯಲ್ ಮೀಡಿಯಾದ ಅದೊಂದು ಗ್ರೂಪ್ಗೆ ಶೇರ್ ಮಾಡಿಬಿಟ್ಟಿದ್ದ.

ಈ ವಿಚಾರ ತಿಳಿದ ಪ್ರಿಯತಮೆ ಪ್ರತಿಭಾ, ವಿಕಾಸ್ಗೆ ಕಾಲ್ ಮಾಡಿ ಹಿಗ್ಗಾಮುಗ್ಗಾ ಬೈದಿದ್ದಳು. ಅಷ್ಟೇ ಅಲ್ಲದೇ, ರಾಜಿ ಪಂಚಾಯ್ತಿಗೆ ಸ್ನೇಹಿತ ಸುಶೀಲ್ ಎನ್ನುವವರ ಪ್ಲಾಟ್ಗೆ ಕರೆದಿದ್ದಳು. ಮಾತುಕತೆಗೆ ಹೋದ ವೈದ್ಯ ವಿಕಾಸ್ಗೆ ಗೆಳತಿ ಪ್ರತಿಭಾಳ ಸ್ನೇಹಿತರಾದ, ಸೂರ್ಯ, ಸುಶೀಲ್, ಗೌತಮ್ ಸೇರಿ ಮನಸೋ ಇಚ್ಛೆ ಹಲ್ಲೆ ಮಾಡಿದ್ದರು. ತೀವ್ರ ರಕ್ತಸ್ರಾವವಾದ ಹಿನ್ನೆಲೆಯಲ್ಲಿ ಮಾತುಕತೆಗೆ ಎಂದು ಹೋದ ವಿಕಾಸ್ ಪ್ಲಾಟ್ನಲ್ಲೇ ಸಾವನ್ನಪ್ಪಿದ್ದ.

ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಗೆಳತಿ ಪ್ರತಿಭಾಳ ಅಶ್ಲೀಲ ವೀಡಿಯೋ ಅಪ್ಲೋಡ್ ಮಾಡಿದ್ದಕ್ಕೆ ಕೊಲೆ ಆಯಿತು ಅನ್ನು ಮಾಹಿತಿ ಲಭ್ಯವಾಗಿತ್ತು. ಆದರೆ ಹೆಚ್ಚಿನ ತನಿಖೆ ನಡೆಸಿದ ಪೊಲೀಸರಿಗೆ ಮತ್ತೊಂದು ಕುತೂಹಲಕಾರಿ ವಿಚಾರ ಬೆಳಕಿಗೆ ಬಂದಿದೆ.

ದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿಜವಾದ ಅಲ್ಪಸಂಖ್ಯಾತರು ಬ್ರಾಹ್ಮಣರು : ಯತ್ನಾಳ್