Select Your Language

Notifications

webdunia
webdunia
webdunia
webdunia

ಜಮೀನಿಗೆ ಶುರುವಾದ ಹೊಡೆದಾಟ ಸಹೋದರರ ಸಾವಿನಲ್ಲಿ ಅಂತ್ಯ

ಜಮೀನಿಗೆ ಶುರುವಾದ ಹೊಡೆದಾಟ ಸಹೋದರರ ಸಾವಿನಲ್ಲಿ ಅಂತ್ಯ

Sampriya

ಚಿಕ್ಕೋಡಿ , ಮಂಗಳವಾರ, 23 ಜುಲೈ 2024 (20:05 IST)
ಚಿಕ್ಕೋಡಿ: ಸಹೋದರರಿಬ್ಬರ ನಡುವೆ ಜಮೀನು ವಿಚಾರಕ್ಕೆ ಶುರುವಾದ ಜಗಳ ಇಬ್ಬರ ಸಾವಿನಲ್ಲಿ ಅಂತ್ಯವಾದ ಘಟನೆ ಬೆಳಗಾವಿಯ ಅಥಣಿ ತಾಲ್ಲೂಕಿನ ಖೋತವಾಡಿ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಹಣಮಂತ ರಾಮಚಂದ್ರ ಖೋತ (35) ಹಾಗೂ ಖಂಡೋಭಾ ತಾನಾಜಿ ಖೋತ (30) ಎಂದು ಗುರುತಿಸಲಾಗಿದೆ.

ಭೂ ವಿವಾದ ಹಿನ್ನೆಲೆಯಲ್ಲಿ ಸಹೋದರ ಸಂಬಂಧಿಗಳ ನಡುವೆ ಸೋಮವಾರ ರಾತ್ರಿ ಜಗಳ ಶುರುವಾಗಿದೆ. ಈ ವೇಳೆ ಒಬ್ಬರಿಗೊಬ್ಬರು ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡಿದ್ದರಿಂದ ಗಂಭೀರ ಗಾಯಗೊಂಡ ಇಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.


ಈ ಸಂಬಂಧ ಅಥಣಿ ಪೊಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಬೆಳಗಾವಿ ಎಸ್‍ಪಿ ಭೀಮಶಂಕರ್ ಗುಳೇದ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಜೆಟ್‌ನಿಂದ ತುಂಬಾ ಸಂತೋಷವಾಗಿದೆ: ಸಂಸದೆ ಕಂಗನಾ ರನೌತ್