Select Your Language

Notifications

webdunia
webdunia
webdunia
webdunia

ಬಲವಂತವಾಗಿ ಮಗನ ಕರೆಯಲು ಬಂದ ತಂದೆಗೆ ಗೂಸಾ ಕೊಟ್ಟವರಾರು?

ಬಲವಂತವಾಗಿ ಮಗನ ಕರೆಯಲು ಬಂದ ತಂದೆಗೆ ಗೂಸಾ ಕೊಟ್ಟವರಾರು?
ಮಂಡ್ಯ , ಬುಧವಾರ, 18 ಜುಲೈ 2018 (16:53 IST)
 
ಶಾಲಾವಾಹನ ಅಡ್ಡಗಟ್ಟಿ ಮಗು ಕದಿಯಲು ಬಂದ ತಂದೆಗೆ ಗ್ರಾಮಸ್ಥರು ಗೂಸಾ ನೀಡಿದ ಘಟನೆ ನಡೆದಿದೆ. ಮಗುವನ್ನು ಬಲವಂತವಾಗಿ ಕರೆದೊಯ್ಯಲು ಬಂದ ತಂದೆಯ ಮೇಲೆ ಗ್ರಾಮಸ್ಥರು ಹಲ್ಲೆ ಮಾಡಿದ್ದಾರೆ. 


ಮಂಡ್ಯ ಜಿಲ್ಲೆ ಕೆ ಆರ್ ಪೇಟೆ ತಾಲೂಕಿನ ನಾಯಸಿಂಗನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಶಾಲಾ ವಾಹನ ಅಡ್ಡಗಟ್ಟಿ ಬಲವಂತವಾಗಿ ಮಗುವನ್ನು ಕರೆದೊಯ್ಯಲು ಯತ್ನಿಸಿದ ತಂದೆ. ಗ್ರಾಮಸ್ಥರು ವಿಚಾರಿಸಿದಾಗ ಮಗು ಅಮ್ಮನ ಬಳಿ ಹೋಗ್ತಿನಿ ಎಂದಿದೆ. ಹೀಗಾಗಿ ಸಿಟ್ಟಿಗೆದ್ದ ಗ್ರಾಮಸ್ಥರಿಂದ ಮಗುವಿನ ತಂದೆಗೆ ಗೂಸ ಬಿದ್ದಿದೆ.

ಆಂದ್ರ ಮೂಲದ ವ್ಯಕ್ತಿಯೊಂದಿಗೆ ಸಂತೆಬಾಚಳ್ಳಿ ಯುವತಿಯೊಂದಿಗೆ ಮದುವೆಯಾಗಿತ್ತು. ಕಳೆದ ಆರು ತಿಂಗಳ ಹಿಂದೆ ದಂಪತಿಗಳು ಜಗಳವಾಡಿಕೊಂಡಿದ್ರು. ಮಗುವನ್ನು ತಾಯಿ ತನ್ನ ತವರು ಮನೆಗೆ ಕರೆದುಕೊಂಡು ಬಂದಿದ್ದಳು. ಈಗ ಮಗುವನ್ನು ಬಲವಂತವಾಗಿ ಕರೆದೊಯ್ಯಲು ಬಂದ ತಂದೆಗೆ ಗ್ರಾಮಸ್ಥರು ಗೂಸ ನೀಡಿದ್ದಾರೆ.‌ ಕೆ ಆರ್ ಪೇಟೆ ಗ್ರಾಮಂತರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಅನ್ನಭಾಗ್ಯ ಪಡಿತರದಲ್ಲಿ ಕಳಪೆ ಬೇಳೆ: ಜನರ ಆಕ್ರೋಶ