Webdunia - Bharat's app for daily news and videos

Install App

ಕಂಠಪೂರ್ತಿ ಕುಡಿದು ಮೊಬೈಲ್ ಟವರ್ ಏರಿದ ಭೂಪ

Webdunia
ಶುಕ್ರವಾರ, 29 ಜೂನ್ 2018 (18:50 IST)
ಕಂಠಪೂರ್ತಿ ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ಮೊಬೈಲ್ ಟವರ್ ಏರಿ ಕುಳಿತು ಕೆಲಕಾಲ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.

ಕುಡಿದ ಅಮಲಿನಲ್ಲಿ ಮೈಸೂರಿನ ಹಿನಕಲ್ ನಿವಾಸಿ ರಮೇಶ್ ಕುಮಾರ (40) ಟವರ್ ಏರಿದ ವ್ಯಕ್ತಿಯಾಗಿದ್ದಾರೆ. ಹಿನಕಲ್ ನ ಟೆಂಟ್ ಬಳಿ ಇರುವ ಟವರ್ ಏರಿದ ರಮೇಶ ನನ್ನು ಕೆಳಗೆ ಇಳಿಸಲು ಪೊಲೀಸರು ಹರ ಸಾಹಸ ಪಟ್ಟರು.

ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಕೂಡ ಹಾಜರಾಗಿ ಟವರ್ ಏರಿದ ರಮೇಶ್ ನನ್ನು ಕೆಳಗೆ ಇಳಿಸಲು ತೀವ್ರ ಪ್ರಯತ್ನ ಪಟ್ಟರು. ಪಿಹೆಚ್‍ಡಿ ಮಾಡಿರುವ ರಮೇಶ್ ಹಲವು ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದಾರೆ. ಇವರಿಗೆ ಮಗಳು, ಪತ್ನಿ ಇದ್ದಾರೆ. ಈ ಹಿಂದೆ ಕೂಡ ಒಂದು ಮೊಬೈಲ್ ಟವರ್ ಏರಿ ರಮೇಶ್ ಆತಂಕ ಉಂಟುಮಾಡಿದ್ದರು. ಈಗ ಎರಡನೇ ಬಾರಿ ಏರಿದ್ದಾರೆ. 
 
 
ಕುಡಿದ ಅಮಲು, ಮೊಬೈಲ್ ಟವರ್, ಆತಂಕ, 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments