Select Your Language

Notifications

webdunia
webdunia
webdunia
webdunia

ಹಠಾತ್ತನೆ ಚಿರತೆ ದಾಳಿ- ಮುಂದೇನಾಯ್ತು?

ಹಠಾತ್ತನೆ ಚಿರತೆ ದಾಳಿ- ಮುಂದೇನಾಯ್ತು?
ಮಧುಗಿರಿ , ಶುಕ್ರವಾರ, 29 ಜೂನ್ 2018 (18:22 IST)
ಕಾಡಿನಲ್ಲಿ ಇರಬೇಕಿದ್ದ ಚಿರತೆ ಆಗಾಗ್ಗೆ ನಾಡಿನಲ್ಲಿ ಕಾಣಿಸಿಕೊಂಡು ಜನರಲ್ಲಿ ಜೀವ ಭಯಕ್ಕೆ ಕಾರಣವಾಗುತ್ತಿದೆ. 

 
ಹೊಲದಲ್ಲಿ ಕೆಲಸ ಮಾಡುತ್ತಿದ್ದವರ ಮೇಲೆ ಹಠಾತ್ತನೆ ಚಿರತೆಯೊಂದು ದಾಳಿ ನಡೆಸಿದೆ. ಪರಿಣಾಮ ಇಬ್ಬರು ಗಾಯಗೊಂಡಿದ್ದಾರೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಲ್ಲೇನಹಳ್ಳಿಯಲ್ಲಿ ಈ ಘಟನೆ ನಡೆದಿದೆ.


ಹೊಲದಲ್ಲಿ ಕೆಲಸ ಮಾಡುತ್ತಿದ್ದ ಕರಿಯಣ್ಣ(55) ಹಾಗೂ ಶಿವಣ್ಣ(49) ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಈ ವರೆಗೆ ನೂರಕ್ಕೂ ಹೆಚ್ಚು ಕುರಿಗಳನ್ನು ತಿಂದಿರುವ ಚಿರತೆ ಈಗ ಮನುಷ್ಯರ ಮೇಲೆ ದಾಳಿ ನಡೆಸುತ್ತಿವೆ. ಇಷ್ಟೆಲ್ಲ ಸಮಸ್ಯೆಗಳಾಗುತ್ತಿದ್ದರೂ ಕ್ರಮ ಕೈಗೊಳ್ಳದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಸಾಲ ಮನ್ನಾ: ಸರಕಾರದಿಂದ ಮೊಸಳೆ ಕಣ್ಣೀರು-ರೈತ ಸಂಘ ಆಕ್ರೋಶ