Select Your Language

Notifications

webdunia
webdunia
webdunia
webdunia

ಬೈಕ್ ಸವಾರ ಸಾವು

ಬೈಕ್ ಸವಾರ ಸಾವು
bangalore , ಗುರುವಾರ, 7 ಏಪ್ರಿಲ್ 2022 (19:45 IST)
ಅಡ್ಡ ಬಂದ ಸೈಕಲ್ ತಪ್ಪಿಸಲು ಹೋಗಿ ಬೈಕ್ ಸವಾರ ಸಾವನ್ನಪ್ಪಿರೋ ಘಟನೆ ಚಾಮರಾಜನಗರ ಜಿಲ್ಲೆ ಕಾವುದವಾಡಿ ಬಳಿ ನಡೆದಿದೆ. ಸಂತ್ತೇಮರಳ್ಳಿ ಗ್ರಾಮದ ನಿವಾಸಿ ದಿನಸಿ ಅಂಗಡಿ ಸೇಟು ರಮೇಶ್ ಮೃತ ದುರ್ದೈವಿ. ರಸ್ತೆಯಲ್ಲಿ ಅಡ್ಡ ಬಂದ ಸೈಕಲ್ ತಪ್ಪಿಸಲು ಹೋಗಿ ಬೈಕ್ ಸವಾರ ಅಯಾತಪ್ಪಿ ಬಿದ್ದಿದ್ದ. ನಂತರ ಬೈಕ್ ಸವಾರನಿಗೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ರವಾನೆ ಮಾಡಲಾಗಿತ್ತು, ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಮೈಸೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಈ ಸಂಬಂದ ಸಂತೇಮರಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಲಾಂ ಹೆಸರನ್ನ ಬದಲಿಸುವಂತೆ ಮನವಿ