Select Your Language

Notifications

webdunia
webdunia
webdunia
webdunia

ಅಧಿಕಾರಕ್ಕೆ ಬರಲೇಬೇಕು ಎಂದು ಪಣತೊಟ್ಟ ಕಾಂಗ್ರೆಸ್

ಅಧಿಕಾರಕ್ಕೆ ಬರಲೇಬೇಕು ಎಂದು ಪಣತೊಟ್ಟ ಕಾಂಗ್ರೆಸ್
ಬೆಂಗಳೂರು , ಭಾನುವಾರ, 10 ಏಪ್ರಿಲ್ 2022 (07:41 IST)
ಬೆಂಗಳೂರು : ಈ ಬಾರಿ ಅಧಿಕಾರಕ್ಕೆ ಬರಲೇಬೇಕು ಅಂತ ಪಣತೊಟ್ಟಿರುವ ಕಾಂಗ್ರೆಸ್, ಕೊನೆಗೂ ಪದಾಧಿಕಾರಿಗಳ ಪಟ್ಟಿ ಪ್ರಕಟಿಸಿದೆ. 
 
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಧ್ಯೆ 3 ವರ್ಷಗಳ ಸತತ ಹಗ್ಗ ಜಗ್ಗಾಟದ ನಂತರ ಈಗ ಪಟ್ಟಿ ರಿಲೀಸ್ ಆಗಿದ್ದು, ಪಟ್ಟಿ ಹನುಮಂತನ ಬಾಲದ ರೀತಿ ಇದೆ.
 
ಕೆಪಿಸಿಸಿಗೆ 109 ಪ್ರಧಾನ ಕಾರ್ಯದರ್ಶಿಗಳು, 40 ಉಪಾಧ್ಯಕ್ಷರನ್ನು ನೇಮಕ ಮಾಡಿ ಎಐಸಿಸಿ ಆದೇಶಿಸಿದೆ. ಎಲ್ಲಾ ರೀತಿಯ ಸಮೀಕರಣದ ತಂತ್ರ ಉಪಯೋಗಿಸಿರೋ ಎಐಸಿಸಿ ಅಳೆದ ತೂಗಿ ಲಿಸ್ಟ್ ರಿಲೀಸ್ ಮಾಡಿದೆ. 
 
53 ಒಬಿಸಿ, 25 ಎಸ್ಸಿ, 4 ಎಸ್ಟಿ, 4 ಮಹಿಳೆ, 22 ಅಲ್ಪಸಂಖ್ಯಾತ, 19 ಲಿಂಗಾಯತ, 5 ರೆಡ್ಡಿ ಲಿಂಗಾಯತ, 16 ಒಕ್ಕಲಿಗ, ಇತರೆ ಸಮುದಾಯದ 4 ಮತ್ತು ಓರ್ವ ಲೈಂಗಿಕ ಅಲ್ಪಸಂಖ್ಯಾತರಿಗೂ ಜವಾಬ್ದಾರಿ ನೀಡಲಾಗಿದೆ. ಪಟ್ಟಿಯಲ್ಲಿ ಸಿದ್ದರಾಮಯ್ಯ ಮೇಲುಗೈ ಸಾಧಿಸಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಸುರ್ಜೆವಾಲ ಟ್ವೀಟ್ಗೆ ಸಿಎಂ ವಾಗ್ದಾಳಿ