Select Your Language

Notifications

webdunia
webdunia
webdunia
webdunia

ಸುರ್ಜೆವಾಲ ಟ್ವೀಟ್ಗೆ ಸಿಎಂ ವಾಗ್ದಾಳಿ

ಸುರ್ಜೆವಾಲ ಟ್ವೀಟ್ಗೆ ಸಿಎಂ ವಾಗ್ದಾಳಿ
ಬೀದರ್ , ಭಾನುವಾರ, 10 ಏಪ್ರಿಲ್ 2022 (07:27 IST)
ಬೀದರ್ : ಸುರ್ಜೆವಾಲ ಟ್ವೀಟ್ಗೆ ಯಾವುದೇ ಕಿಮ್ಮತ್ತಿಲ್ಲ, ಅವರ ಹತ್ತಿರ ಏನಾದ್ರು ಆಧಾರ ಇದ್ದರೆ ಕೊಡಲಿ ಎಂದು ಸಿಎಂ ಬಸವರಾಜ ಬೊಮ್ಮಾಯಿ  ವಾಗ್ದಾಳಿ ನಡೆಸಿದ್ದಾರೆ.

ಬಿಟ್ ಕಾಯಿನ್ ಬಗ್ಗೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೆವಾಲ ಟ್ವೀಟ್ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿಎಂ, ಸುಮ್ಮನೆ ಟ್ವೀಟ್ ಮಾಡಿದರೆ ಏನು ಪ್ರಯೋಜನೆ ಇಲ್ಲ. ಈ ಬಗ್ಗೆ ಸದನದಲ್ಲೇ ಹೇಳಿದ್ದೇನೆ ಎಂದು ಸುರ್ಜೆವಾಲಗೆ ಟಾಂಗ್ ನೀಡಿದ್ದಾರೆ. 

ವಕ್ಫ್ ಬೋರ್ಡ್ ಬ್ಯಾನ್ ಬಗ್ಗೆ ಪ್ರಮೋದ್ ಮುತಾಲಿಕ್ ಹೇಳಿಕೆ ವಿಚಾರ ಪ್ರತಿಕ್ರಿಯೆ ನೀಡಿದ ಸಿಎಂ, ಅವರು ಯಾವ ಅಭಿಯಾನ ಬೇಕಾದರೂ ಮಾಡಲಿ. ಅದಕ್ಕೂ ನಮಗೂ ಸಂಬಂಧವಿಲ್ಲ. ನಾವು ಕಾನೂನು ಸುವ್ಯವಸ್ಥೆ ಶಾಂತಿ ಕಾಪಾಡಬೇಕು ಎಂದಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿಂದು ಆಂಜನೇಯನ ದೇಗುಲಗಳಲ್ಲಿ ರಾಮನ ಆರಾಧನೆ