Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಪಕ್ಷದಲ್ಲೇ ಉಳಿಯಲು ಸತೀಶ ಜಾರಕಿಹೊಳಿ ತೀರ್ಮಾನ

ಕಾಂಗ್ರೆಸ್
ಬೆಂಗಳೂರು , ಬುಧವಾರ, 31 ಜನವರಿ 2018 (08:53 IST)

ಕಾಂಗ್ರೆಸ್ ರಾಜ್ಯ ನಾಯಕರ ವಿರುದ್ಧ ಮುನಿಸಿಕೊಂಡಿದ್ದ ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ಜೊತೆಗೆ ನಡೆಸಿದ ಮಾತುಕತೆ ಫಲಪ್ರದವಾಗಿದ್ದು, ಕಾಂಗ್ರೆಸ್ ಪಕ್ಷದಲ್ಲೇ ಉಳಿಯಲು ಸಮ್ಮತಿಸಿದ್ದಾರೆ.

ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ ಅವರ ಮಧ್ಯಸ್ತಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆಗೆ ಮಾತುಕತೆ ನಡೆಸಲಾಗಿದ್ದು, ಈ ವೇಳೆ ಪಕ್ಷದಲ್ಲೇ ಉಳಿಯುವುದಾಗಿ ಸತೀಶ ಜಾರಕಿಹೊಳಿ ಹೇಳಿದ್ದಾರೆ.

ವೇಣುಗೋಪಾಲ ಸತೀಶ ಜಾರಕಿಹೊಳಿಯೊಂದಿಗೆ ಒಂದು ತಾಸು ಮಾತುಕತೆ ನಡೆದ ನಂತರ ಸಿದ್ದರಾಮಯ್ಯರೊಂದಿಗೆ ಕೂಡಿಕೊಂಡು ಮೂವರು ಎರಡು ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ.

ನಾನು ಕಾಂಗ್ರೆಸ್ ಪಕ್ಷದಲ್ಲಿ ಇರುತ್ತೇನೆ. ಆದರೆ, ನನ್ನ ಮಾತಿಗೂ ಬೆಲೆ ನೀಡಬೇಕು ಎಂದು ಜಾರಕಿಹೊಳಿ ಹೇಳಿದ್ದಕ್ಕೆ ಸಿದ್ದರಾಮಯ್ಯ ಸಮ್ಮತಿ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.


Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಸಂಜೆ ತಪ್ಪದೇ ಆಕಾಶದೆಡೆಗಿರಲಿ ಗಮನ! ಬಾನದಾರಿಯಲ್ಲಿ ಚಂದ್ರನ ಹಾದಿ ತಪ್ಪದೇ ನೋಡಿ!