Select Your Language

Notifications

webdunia
webdunia
webdunia
webdunia

ವಿವಾದ ಸೃಷ್ಠಿಸುವಲ್ಲಿ ಕಾಂಗ್ರೆಸ್ಸಿಗರು ನಿಸ್ಸೀಮರು– ಈಶ್ವರಪ್ಪ ವಾಗ್ದಾಳಿ

ವಿವಾದ ಸೃಷ್ಠಿಸುವಲ್ಲಿ ಕಾಂಗ್ರೆಸ್ಸಿಗರು ನಿಸ್ಸೀಮರು– ಈಶ್ವರಪ್ಪ ವಾಗ್ದಾಳಿ
ತುಮಕೂರು , ಮಂಗಳವಾರ, 30 ಜನವರಿ 2018 (19:24 IST)
ಒಂದೊಂದು ಕಾಲಕ್ಕೆ ಒಂದೊಂದು ವಿವಾದ ಸೃಷ್ಠಿಸುವಲ್ಲಿ ಕಾಂಗ್ರೆಸ್ಸಿಗರು ನಿಸ್ಸೀಮರು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಹಿಂದೆ ವೀರಶೈವ– ಲಿಂಗಾಯತ, ನಂತರ ಮಹಾದಾಯಿ ಆಯಿತು. ಈಗ ಮತ್ತೊಂದು ವಿವಾದ ಸೃಷ್ಠಿ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
 
ಎಐಎಂಐಎಂ ಸಂಸದ ಅಸಾದುದ್ದೀನ್ ಒವೈಸಿ ಜೊತೆ ಬಿಜೆಪಿ ಒಪ್ಪಂದ ಕೇವಲ ಕಾಂಗ್ರೆಸ್‌ ವದಂತಿ ಎಂದಿದ್ದಾರೆ.
 
ಜಾತಿ ಜಾತಿ ನಡುವೆ, ಧರ್ಮ-ಧರ್ಮಗಳ ನಡುವೆ ವಿಷ ಬೀಜ ಬಿತ್ತುವ ಕಾಂಗ್ರೆಸ್‌ ಮುಸ್ಲಿಮರನ್ನು ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಗೌರಿ ಹುಟ್ಟಹಬ್ಬದ ಕಾರ್ಯಕ್ರಮ ಬಿಜೆಪಿ ವಿರುದ್ಧ ಪ್ರಚಾರಕ್ಕೆ ಸೀಮಿತ– ಸುರೇಶಕುಮಾರ್