Select Your Language

Notifications

webdunia
webdunia
webdunia
webdunia

ಗೌರಿ ಹುಟ್ಟಹಬ್ಬದ ಕಾರ್ಯಕ್ರಮ ಬಿಜೆಪಿ ವಿರುದ್ಧ ಪ್ರಚಾರಕ್ಕೆ ಸೀಮಿತ– ಸುರೇಶಕುಮಾರ್

ಗೌರಿ ಹುಟ್ಟಹಬ್ಬದ ಕಾರ್ಯಕ್ರಮ ಬಿಜೆಪಿ ವಿರುದ್ಧ ಪ್ರಚಾರಕ್ಕೆ ಸೀಮಿತ– ಸುರೇಶಕುಮಾರ್
ಬೆಂಗಳೂರು , ಮಂಗಳವಾರ, 30 ಜನವರಿ 2018 (19:13 IST)
ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹುಟ್ಟು ಹಬ್ಬದ ಕಾರ್ಯಕ್ರಮವನ್ನು ಗೌರಿ ಸ್ಮರಣೆಗೆ ಬಳಸಿಕೊಳ್ಳದೆ ಕೇವಲ ಬಿಜೆಪಿ ವಿರುದ್ಧ ಚುನಾವಣೆ ಪ್ರಚಾರಕ್ಕೆ ಸೀಮಿತಗೊಳಿಸಲಾಗಿದೆ ಎಂದು ಬಿಜೆಪಿ ಮಾಜಿ ಸಚಿವ ಸುರೇಶ ಕುಮಾರ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗೌರಿ ಲಂಕೇಶ ಕಾರ್ಯಕ್ರದಲ್ಲಿ ಯಾರೊಬ್ಬರೂ ಗೌರಿ ಅವರ ಸಾಧನೆ ಹಾಗೂ ಬೆಳೆದು ಬಂದ ದಾರಿಯ ಬಗ್ಗೆ ಮಾತನಾಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎಲ್ಲರೂ ಸಂಘ ಪರಿವಾರ, ಬಿಜೆಪಿ ಹಾಗೂ ಮೋದಿ ಅವರನ್ನು ಟಾರ್ಗೆಟ್ ಮಾಡಿದರೆ ಹೊರತು ಗೌರಿ ಹತ್ಯೆ ನಡೆದು ಐದು ತಿಂಗಳಾದರೂ ಆರೋಪಿಗಳನ್ನು ಬಂಧಿಸದ ಗೃಹ ಇಲಾಖೆಯ ವೈಫಲ್ಯದ ಬಗ್ಗೆ ಮಾತನಾಡಲಿಲ್ಲ ಎಂದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ನಿರ್ಣಯ ಕೈಗೊಳ್ಳಲು ಗೋವಾ ಸ್ಪೀಕರ್ ಯಾರು– ಸಿದ್ದರಾಮಯ್ಯ ಪ್ರಶ್ನೆ