Select Your Language

Notifications

webdunia
webdunia
webdunia
webdunia

ಬಿಜೆಪಿ ಬೂತ್ ವಿಜಯ ಅಭಿಯಾನಮನೆ ಮನೆಗೆ ತೆರಳಿ ಧ್ವಜ ಕಟ್ಟಿದ ಸಿಎಂ

ಬಿಜೆಪಿ ಬೂತ್ ವಿಜಯ ಅಭಿಯಾನಮನೆ ಮನೆಗೆ ತೆರಳಿ ಧ್ವಜ ಕಟ್ಟಿದ ಸಿಎಂ
bangalore , ಸೋಮವಾರ, 2 ಜನವರಿ 2023 (20:52 IST)
ರಾಜ್ಯ ಬಿಜೆಪಿಯ ಮಹತ್ವಾಕಾಂಕ್ಷಿ ಬೂತ್ ವಿಜಯ ಅಭಿಯಾನ ಆರಂಭಗೊಂಡಿದೆ. ಕಾರ್ಯಕರ್ತರ ಮನೆಗಳಿಗೆ ಸಾಂಕೇತಿಕವಾಗಿ ಧ್ವಜ ಕಟ್ಟುವ ಮೂಲಕ 10 ದಿನಗಳ ಅಭಿಯಾನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.ಅಭಿಯಾನಬಾವುಟ ಕಟ್ಟಿದ ಬಳಿಕ ಬಿಜೆಪಿ ಬೂತ್ ಕಮಿಟಿ ಸಭೆಯಲ್ಲಿ ಭಾಗಿಯಾದ ಸಿಎಂ, ಯಾವ ರೀತಿ ಅಭಿಯಾನ ನಡೆಸಬೇಕು ಎನ್ನುವ ಕುರಿತು ಬೂತ್ ಸಮಿತಿಗಳಿಗೆ ಮಾರ್ಗದರ್ಶನ ನೀಡಿದರು. ಇಂದಿನಿಂದ ಆರಂಭಗೊಂಡಿರುವ ಅಭಿಯಾನ ಜನವರಿ 12ರವರೆಗೂ ನಡೆಯಲಿದೆ. ಬಿಜೆಪಿ ಸಂಘಟನಾತ್ಮಕ 39 ಜಿಲ್ಲೆ, 312 ಮಂಡಳ, 1,445 ಮಹಾಶಕ್ತಿ ಕೇಂದ್ರ 11,642 ಶಕ್ತಿ ಕೇಂದ್ರ, 58,186 ಬೂತ್‌ಗಳಲ್ಲಿ ಅಭಿಯಾನ ಆರಂಭಗೊಂಡಿದೆ. ಶಿವಾಜಿನಗರದಲ್ಲಿ ಸಿಎಂ ಅಭಿಯಾನಕ್ಕೆ ಚಾಲನೆ ನೀಡಿದರು.ಮೂರು ಮನೆಗಳಿಗೆ ಸಿಎಂ ಧ್ವಜ ಕಟ್ಟುವ ಮೂಲಕ ಸಾಂಕೇತಿಕವಾಗಿ ಧ್ವಜ ಕಟ್ಟುವ ಅಭಿಯಾನಕ್ಕೆ ಚಾಲನೆ ನೀಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಮಹಾದಾಯಿ ಜನಾಂದೋಲನ ಸಮಾವೇಶ