Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ನವರು ದಿವಾಳಿಯಾಗಿದ್ದಾರೆಂದು ವಾಗ್ದಾಳಿ ನಡೆಸಿದ ಸಿಎಂ

ಕಾಂಗ್ರೆಸ್ ನವರು ದಿವಾಳಿಯಾಗಿದ್ದಾರೆಂದು ವಾಗ್ದಾಳಿ ನಡೆಸಿದ ಸಿಎಂ
bangalore , ಗುರುವಾರ, 17 ನವೆಂಬರ್ 2022 (15:07 IST)
ಮತದಾರರ ಪಟ್ಟಿ ಪರಿಷ್ಕರಣೆ ವಿಚಾರವಾಗಿ ರಮಣಶ್ರೀ ಹೋಟೆಲ್ ಬಳಿ ಸಿಎಂ ಬಸವರಾಜ್ ಬೊಮ್ಮಾಯಿ‌ ಪ್ರತಿಕ್ರಿಯಿಸಿದ್ದಾರೆ.ಕಾಂಗ್ರೆಸ್ ನವರು ತಮ್ಮ ವಿಚಾರದಲ್ಲಿ ದಿವಾಳಿಯಾಗಿದ್ದಾರೆ.ಎಲೆಕ್ಷನ್ ಕಮೀಷನ್ ಟ್ವಿಸ್ಟ್ ಮಾಡಿದಕ್ಕೆ ಬಿಬಿಎಂಪಿಗೆ ನೀಡಿದ್ದಾರೆ.ಸ್ಥಳೀಯ ಸಂಸ್ಥೆಗಳಿಗೆ ಎನ್‌ಜಿಓಗಳಿಗೆ ಕೊಟ್ಟಿರುತ್ತಾರೆ. 2018 ರಲ್ಲೂ ಎನ್ ಜಿಓಗಳಿಗೆ ಕೊಡಲಾಗಿತ್ತು ಪಿಎಲ್ ಜಿ ಅದನ್ನ ಮಿಸ್ ಯೂಸ್ ಮಾಡಿಕೊಂಡಿದ್ದಾರೆ ಅಂತಾ ಮಾತುಗಳು ಕೇಳಿ‌ಬರುತ್ತಿವೆ. ಎಲೆಕ್ಷನ್ ಕಮೀಷನ್ ಹಾಗೂ ಬಿಬಿಎಂಪಿ, ಮಿಸ್ ಯೂಸ್ ಅವರ ಲಿಂಕ್ ಇರುವುದು ಎಲ್ಲವನ್ನ ತನಿಖೆ ಮಾಡುವುದಕ್ಕೆ ಸೂಚನೆಯನ್ನ ನೀಡ್ತೇನೆ.ಈ ವಿಚಾರ ಬಗ್ಗೆ ಯಾರು ದೂರು ಕೊಡ್ತಾರೆ ಕೊಡ್ಲಿ ಅದನ್ನ ನಾನು ತನಿಖೆಯನ್ನ ಮಾಡ್ತೀನಿ.ಕಾಂಗ್ರೆಸ್ ನವರು ಸಂಪೂರ್ಣವಾಗಿ ದಿವಾಳಿಯಾಗಿದ್ದಾರೆ.ನನ್ನಗೆ ರಾಜೀನಾಮೆ ಕೊಡು ಅಂತಾ ಹೇಳುವುದಕ್ಕೆ ಇವರು ಯಾರು.?ಚುನಾವಣೆಗೆ ಬಿಬಿಎಂಪಿ ಮುಖಾಂತರ ಮತಗಳನ್ನ ಸೆಳೆಯುವುದಕ್ಕೆ ನಾನು ಮುಂದಾದರೆ ಅದರ ದಾಖಲೆ ಕೊಡಲಿ. ಸುಮ್ಮ ಸುಮ್ಮನೆ  ಆರೋಪ ಮಾಡುವುದು ತಪ್ಪು ಅವರು ದಾಖಲೆ ನೀಡಲಿ ಅಂತಾ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ್ರು. 

Share this Story:

Follow Webdunia kannada

ಮುಂದಿನ ಸುದ್ದಿ

ಸಿಲಿಂಡರ್‌ಗಳಿಗೆ ಕ್ಯೂಆರ್‌ ಕೋಡ್‌ ಅಳವಡಿಕೆ