Select Your Language

Notifications

webdunia
webdunia
webdunia
webdunia

ಸರ್ಕಾರಿ ಬಂಗಲೆಯನ್ನು ತೊರೆಯದ ಮಾಜಿ ಮಂತ್ರಿಗಳಿಗೆ ಬಿಸಿ ಮುಟ್ಟಿಸಲು ಮುಂದಾದ ಕೇಂದ್ರ ಸರ್ಕಾರ

ಸರ್ಕಾರಿ ಬಂಗಲೆಯನ್ನು ತೊರೆಯದ ಮಾಜಿ ಮಂತ್ರಿಗಳಿಗೆ ಬಿಸಿ ಮುಟ್ಟಿಸಲು ಮುಂದಾದ  ಕೇಂದ್ರ ಸರ್ಕಾರ
ಬೆಂಗಳೂರು , ಸೋಮವಾರ, 16 ಸೆಪ್ಟಂಬರ್ 2019 (11:19 IST)
ಬೆಂಗಳೂರು : ಸರ್ಕಾರಿ ಬಂಗಲೆಯನ್ನು ತೊರೆಯದ ಮಾಜಿ ಮಂತ್ರಿಗಳಿಗೆ ತಕ್ಕ ಪಾಠ ಕಲಿಸಲು ಇದೀಗ ಕೇಂದ್ರ ಸರ್ಕಾರ ಮುಂದಾಗಿದೆ.




ಸರ್ಕಾರ ಬಿದ್ದುಹೋದ  ಬಳಿಕ ಒಂದು ತಿಂಗಳೊಳಗಾಗಿ ಮಾಜಿ ಸಂಸದರು ಬಂಗಲೆ ತೆರವುಗೊಳಿಸಬೇಕೆಂಬ ನಿಯಮವಿದ್ದರೂ ಕೆಲವರು ಬಂಗಲೆ ಖಾಲಿ ಮಾಡದ ಹಿನ್ನಲೆಯಲ್ಲಿ ನೋಟಿಸ್ ನೀಡಲಾಗಿತ್ತು. ಇದಕ್ಕೆ ಸ್ಪಂದಿಸಿದ ಕೆಲವರು ತಕ್ಷಣ ಬಂಗಲೆ ಖಾಲಿ ಮಾಡಿದರೆ, ಇನ್ನೂ ಕೆಲವರು ಈ ನೋಟಿಸ್ ಗೆ ಸ್ಪಂದಿಸದ ಕಾರಣ ಅವರಿಗೆ ಬಿಸಿ ಮುಟ್ಟಿಸಲು  ಕೇಂದ್ರ ಸರ್ಕಾರ ಮುಂದಾಗಿದೆ.


ಇದೀಗ ಕೇಂದ್ರ ಸರ್ಕಾರ, ಸಾರ್ವಜನಿಕ ಆವರಣ ಕಾಯ್ದೆಯಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದು, ಇದರ ಜೊತೆಗೆ ನೀರು, ವಿದ್ಯುತ್ ಮತ್ತು ಅಡುಗೆ ಅನಿಲದಂತಹ ಮೂಲಸೌಕರ್ಯಗಳನ್ನು ಕಡಿತಗೊಳಿಸುವ ನಿರ್ಧಾರ ಮಾಡಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದುಬಾರಿ ಟ್ರಾಫಿಕ್ ದಂಡ ರೂಲ್ಸ್ ಗೆ ಇಂದು ರಾಜ್ಯ ಸರ್ಕಾರದಿಂದ ಬೀಳುತ್ತಾ ಬ್ರೇಕ್