Select Your Language

Notifications

webdunia
webdunia
webdunia
webdunia

ಸಿಸಿಬಿ( ಕೇಂದ್ರ ಅಪರಾಧ ಪತ್ತೆ ದಳ) ಪೊಲೀಸರು ದಾಳಿ ನಡೆಸಿ ದರೋಡೆಗೆ ಯತ್ನ

ಸಿಸಿಬಿ( ಕೇಂದ್ರ ಅಪರಾಧ ಪತ್ತೆ ದಳ) ಪೊಲೀಸರು ದಾಳಿ ನಡೆಸಿ ದರೋಡೆಗೆ ಯತ್ನ
bangalore , ಶನಿವಾರ, 13 ನವೆಂಬರ್ 2021 (21:38 IST)
fir

ಎಚ್.ಎ.ಎಲ್ ಠಾಣೆಯಲ್ಲಿ ಪ್ರಕರಣ ಕುರಿತು ವಿಚಾರಣೆ ನಡೆಯುತ್ತಿದೆ ಎನ್ನುವ ಮಾಹಿತಿ ಹೊರಬಿದ್ದಿದೆ.
 
ಎಚ್.ಎ.ಎಲ್( ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್) ಬಳಿ ಹೊಂಚು ಹಾಕಿ ದರೋಡೆ ಮಾಡಲು ನಾಲ್ವರ ದರೊಡೆಕೋರರ ತಂಡ ಸಜ್ಜಾಗಿತ್ತು. ಅಯ್ಯಪ್ಪ ಅಲಿಯಾಸ್  ಅಯ್ಯ ಎನ್ನುವವನು ಈ ಹಿಂದೆಯೇ ಬೊಮ್ಮನಹಳ್ಳಿ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದ. ಅಜಯ್, ಅಕ್ಷಯ್, ನವೀನ್ ಎಂಬ ಮೂವರನ್ನು ಜೊತೆಗೆ ಸೇರಿಸಿಕೊಂಡು ದರೋಡೆಗೆ ಮುಂದಾಗಿದ್ದ ಎಂದು ಸಿಸಿಬಿ ಹಿರಿಯ ಪೋಲಿಸ್ ಅಧಿಕಾರಿಗಳು ತಿಳಿಸಿದ್ದಾರೆ.
 
ಈ ಕುರಿತು ಮಾಹಿತಿ ಪಡೆದು ದಾಳಿ ನಡೆಸಿದ ಸಿಸಿಬಿ ಪೊಲೀಸ್ ಸಿಬ್ಬಂದಿ ದರೋಡೆಕೋರರನ್ನು ಬಂಧಿಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸುತ್ತಿದ್ದ ಲಾಂಗು ಮಚ್ಚು‌ ವಶಕ್ಕೆ ಪಡೆದುಕೊಂಡು, ಎಚ್ ಎ ಎಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ವಿಚಾರಣೆ ನೆಡೆಸಲಾಗುತ್ತಿದೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಲವ್ ಯೂ, ವಿ ಮಿಸ್ ಯೂ ಅಪ್ಪು ಎಂದು ಡೈಲಾಗ್ ಕಿಂಗ್ ಸಾಯಿಕುಮಾರ್ ಭಾವುಕ