ಬಿಜೆಪಿಯವರು ಆಪರೇಷನ್ ಜಪ ಮಾಡ್ತಿದ್ದಾರಂತೆ!

Webdunia
ಸೋಮವಾರ, 11 ಫೆಬ್ರವರಿ 2019 (14:15 IST)
ಬಿಜೆಪಿಯವರು ರಾಜ್ಯದ ಬರಗಾಲದ ಚಿಂತನೆ ಬಿಟ್ಟು‌ ಆಪರೇಷನ್ ಕಮಲದ ಬಗ್ಗೆ ಜಪ  ಮಾಡುತ್ತಿದ್ದಾರೆ ಎಂದು ಸಚಿವರೊಬ್ಬರು ಗುಡುಗಿದ್ದಾರೆ.

ಈ ಮೊದಲು ಆಡಿಯೋ ಮಿಮಿಕ್ರಿ ಅಂದವರು ಈಗ ಏಕೆ ಒಪ್ಪಿಕೊಂಡಿದ್ದಾರೆ ಎಂದು ಪ್ರಶ್ನೆ ಮಾಡಿದ ಸಚಿವರು,  ಮೊದಲು ಆಪರೇಷನ್ ಕಮಲದ ಬಗ್ಗೆ ಮಾತಾಡಿದ್ದ ಆಡಿಯೋ ನನ್ನದಲ್ಲ ಎಂದಿದ್ದ ಬಿಎಸ್ವೈ ಈಗ ಒಪ್ಪಿಕೊಂಡಿದ್ದೇಕೆ?  ಯಾರು ಯಾರನ್ನೇ ಕಳಿಸಲಿ ಯಡಿಯೂರಪ್ಪ ಹಾಗೆ ಮಾತನಾಡಿದ್ದು ತಪ್ಪಲ್ಲವೇ? ಎಂದು  ಶಾಸಕರ‌ ಖರೀದಿ ಕುರಿತು ಮಾತನಾಡಿದ್ದ ಆಡಿಯೋ ಬಗ್ಗೆ ಸಚಿವ ಹೆಚ್.ಡಿ ರೇವಣ್ಣ ಪ್ರಶ್ನೆ ಮಾಡಿದ್ದಾರೆ.

ಹಾಸನದಲ್ಲಿ ಮಾತನಾಡಿದ ಅವರು, ದೋಸ್ತಿ ಸರಕಾರದ ವಿರುದ್ಧ ಕೇಳಿಬರುತ್ತಿರುವ ಟೀಕೆ‌, ಆರೋಪಗಳಿಗೆ ಪ್ರತಿಕ್ರಿಯೆ ನೀಡಲ್ಲ. ಅವರಿಗೆ ನಾ ರಿಯಾಕ್ಟ್ ಮಾಡಿದ್ರೆ ಪೊಳ್ಳೆದ್ದು ಹೋಗ್ತೀನಿ ಎಂದರು.
ಬಿಜೆಪಿಯವರ  ಬಗ್ಗೆ ನಾಡಿನ ಜನರಿಗೆ ಬಿಡ್ತೇನೆ, ಅವರನ್ನು ನೆಗ್ಲೆಕ್ಟ್ ಮಾಡ್ತೇನೆ ಎಂದು  ಹಾಸನದಲ್ಲಿ ಲೋಕೋ ಪಯೋಗಿ ಸಚಿವ ಎಚ್.ಡಿ.ರೇವಣ್ಣ‌ ಕಿಡಿಕಾರಿದರು.

ನಮ್ಮ ಸರ್ಕಾರಕ್ಕೆ  ಏನೂ ಆಗಲ್ಲ‌. ಸರ್ಕಾರ ಸುಭದ್ರವಾಗಿದೆ. ರಾಜ್ಯದ 156 ತಾಲ್ಲೂಕಿನಲ್ಲಿ ಬರಗಾಲ‌ ಇದೆ. ನಾವು ಮೂರು ಸಾವಿರ ಕೋಟಿ ನೆರವು ಕೇಳಿದ್ದೆವು. ನಮಗೆ 900 ಕೋಟಿ, ಪಕ್ಕದ ಮಹಾರಾಷ್ಟ್ರ ಕ್ಕೆ 4 ಸಾವಿರ ಕೋಟಿ ಕೊಡ್ತಾರೆ. ಬಿಜೆಪಿ ನಾಯಕರು ರಾಜ್ಯದಲ್ಲಿ ಯಾವ ನೈತಿಕತೆಯಿಂದ ಮತ ಕೇಳುತ್ತಾರೆ?  ಐದು ವರ್ಷ ರಾಜ್ಯಕ್ಕೆ 
ಕೇಂದ್ರದ ಕೊಡುಗೆ ಏನು? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಮ್ಮಪ್ಪ ಯಾವುದೇ ಹಗರಣ ಮಾಡಿಲ್ಲ, ಐದು ವರ್ಷವೂ ಅವರೇ ಸಿಎಂ: ಸಿದ್ದರಾಮಯ್ಯ ಪುತ್ರ ಯತೀಂದ್ರ

ಐಎಎಸ್ ಅಧಿಕಾರಿ ಮಹಂತೇಶ ಬೀಳಗಿ ಕುಟುಂಬಕ್ಕೆ ಉದ್ಯೋಗ ಕೊಡಲು ವಿಜಯೇಂದ್ರ ಸರ್ಕಾರಕ್ಕೆ ಪತ್ರ

ಡಿಕೆ ಶಿವಕುಮಾರ್ ಗೆ ಸಿಎಂ ಕಟ್ಟಿದರೆ ಹೈಕಮಾಂಡ್ ಗೆ ಶುರುವಾಗಿದೆ ಈ ಭಯ

ಮೋದಿ ಬರುತ್ತಿದ್ದಾರೆಂದು ಉಡುಪಿಯಲ್ಲಿ ಫುಲ್ ಆಕ್ಟಿವ್ ಆದ ಬಿಜೆಪಿ ನಾಯಕರು

ಭಾರತದ ನಾಗರಿಕ ಅಲ್ಲದಿದ್ದರೂ ಆಧಾರ್ ಕಾರ್ಡ್ ಇದೆ ಎಂದು ಮತದಾನ ಅವಕಾಶ ನೀಡಬೇಕೇ: ಸುಪ್ರೀಂಕೋರ್ಟ್ ತಪರಾಕಿ

ಮುಂದಿನ ಸುದ್ದಿ
Show comments