Select Your Language

Notifications

webdunia
webdunia
webdunia
webdunia

ಮೊಳೆ ಸುರಿದಿದ್ದ ಆರೋಪಿ ಸರೆಂಡರ್

ಮೊಳೆ ಸುರಿದಿದ್ದ ಆರೋಪಿ ಸರೆಂಡರ್
ಚಿಕ್ಕಮಗಳೂರು , ಭಾನುವಾರ, 18 ಡಿಸೆಂಬರ್ 2022 (20:24 IST)
ದತ್ತಜಯಂತಿ ವೇಳೆ ದತ್ತಪೀಠದ ರಸ್ತೆಯಲ್ಲಿ ಮೊಳೆ ಸುರಿದಿದ್ದ ಮತ್ತೋರ್ವ ಆರೋಪಿ ಕೋರ್ಟ್​​ಗೆ ಶರಣಾಗಿದ್ದಾನೆ. ಆರೋಪಿ ಅಜಂ ಪಾಷಾ ನೇರವಾಗಿ ಕೋರ್ಟಿಗೆ ಬಂದು ಶರಣಾಗಿದ್ದಾನೆ. ಚಿಕ್ಕಮಗಳೂರು ನಗರದ ಗೌರಿ ಕಾಲುವೆ ನಿವಾಸಿಯಾಗಿರೋ ಅಜಂಪಾಷಾ ಮೊಳೆಗಳನ್ನ ಸುರಿದಿದ್ದ ಪ್ರಕರಣದಲ್ಲಿ ಭಾಗಿಯಾಗಿದ್ದನು. ಈ ಹಿಂದೆ ಇಬ್ಬರು ಆರೋಪಿಗಳನ್ನ ಬಂಧಿಸಿದ್ದ ಪೊಲೀಸರು, ಇದೀಗ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ. ಮಹಮದ್ ಶಹಬಾಸ್, ವಾಹೀದ್ ಹುಸೇನ್, ಅಜಂ ಬಂಧಿತ ಆರೋಪಿಗಳಾಗಿದ್ಧಾರೆ. ಡಿಸೆಂಬರ್ 6, 7, 8ರಂದು ದತ್ತಜಯಂತಿ ಕಾರ್ಯಕ್ರಮ ನಡೆದಿತ್ತು. ಮೊದಲ ದಿನ ಮಹಿಳೆಯರು ಪೀಠಕ್ಕೆ ಹೋಗುವ ಮಾರ್ಗದಲ್ಲಿ ಮೊಳೆಗಳನ್ನ ಚೆಲ್ಲಿದ್ದರು. ಈ ವೇಳೆ ಪೊಲೀಸ್ ಸೇರಿದಂತೆ ನಾಲ್ಕೈದು ವಾಹನಗಳು  ಪಂಚರ್ ಆಗಿ ರಸ್ತೆ ಮಧ್ಯೆದಲ್ಲೇ ನಿಂತಿದ್ದವು. ಕಿಡಿಗೇಡಿಗಳು ಹಾರ್ಡ್‍ವೇರ್ ಶಾಪ್‍ನಲ್ಲಿ 4 ಕೆಜಿ ಮೊಳೆಗಳನ್ನ ಖರೀದಿಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಡಿಸೆಂಬರ್​ 25ಕ್ಕೆ ರೆಡ್ಡಿ ಕ್ಲೈಮ್ಯಾಕ್ಸ್..?