Publish Date: Sat, 14 Sep 2019 (19:44 IST)
Updated Date: Sat, 14 Sep 2019 (19:46 IST)
ಸಾಲಗಾರರ ಕಿರುಕುಳದಿಂದ ಬೇಸತ್ತ ಗಂಡನೊಬ್ಬ ತನ್ನ ಪತ್ನಿಗೆ ಮಾಡಬಾರದ್ದನ್ನು ಮಾಡಿದ್ದಾನೆ.
ಸಾಲಗಾರರ ಕಿರುಕುಳದಿಂದ ಬೇಸತ್ತ ಪತ್ನಿ ಪತಿಗೆ ಪ್ರಶ್ನೆ ಮಾಡಿದ್ದಾಳೆ. ಸಾಲಮಾಡಿಕೊಂಡಿದ್ದ ಪತಿ ತನ್ನ ಪತ್ನಿಯ ಮೇಲೆ ಗರಂ ಆಗಿ ರಾಡ್ ನಿಂದ ಹೊಡೆದು ಕೊಲೆ ಮಾಡಿದ್ದಾನೆ. ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ವಿಜಯಪುರ ಜಿಲ್ಲೆಯ ಕುಂಟೋಜಿ ಗ್ರಾಮದ ಸುರೇಶ ಸಂಗಪ್ಪ ಸಜ್ಜನ, ಪತ್ನಿ ರತ್ನಾ ಸಜ್ಜನರನ್ನ ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದ್ದು, ಮುದ್ದೇಬಿಹಾಳ ಠಾಣೆಯಲ್ಲಿ ಕೇಸ್ ದಾಖಲಾಗಿದೆ.