Select Your Language

Notifications

webdunia
webdunia
webdunia
webdunia

ಬುದ್ಧಿಮಾಂದ್ಯ ತಮ್ಮನ ಎದುರಲ್ಲೇ ಯುವತಿ ಮಾಡಿದಳು ಆ ಕೆಲಸ

ಬುದ್ಧಿಮಾಂದ್ಯ ತಮ್ಮನ ಎದುರಲ್ಲೇ ಯುವತಿ ಮಾಡಿದಳು ಆ ಕೆಲಸ
ಬೆಂಗಳೂರು , ಶುಕ್ರವಾರ, 20 ಸೆಪ್ಟಂಬರ್ 2019 (22:28 IST)
ಬುದ್ಧಿಮಾಂದ್ಯ ತಮ್ಮನ ಎದುರಲ್ಲೇ ಯುವತಿಯೊಬ್ಬಳು ಮಾಡಬಾರದ ಕೆಲಸ ಮಾಡಿದ್ದಾಳೆ.

ಕೆಲಸವಿಲ್ಲದೆ ಜೀವನ ನಡೆಸಲು ಸಾಧ್ಯವಾಗದೇ ಯುವತಿ ಮನನೊಂದು ಬುದ್ದಿಮಾಂದ್ಯ ತಮ್ಮನ ಎದುರಲ್ಲಿಯೇ ನೇಣಿಗೆ ಶರಣಾಗಿರುವಂತಹ ದಾರುಣ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಅತ್ತಿಬೆಲೆಯಲ್ಲಿ ನಡೆದಿದೆ.

ಅತ್ತಿಬೆಲೆಯ ನಾಗಲಿಂಗೇಶ್ವರ ದೇವಸ್ಥಾನದ ಬಳಿಯ ನಿವಾಸಿ ಮಂಜುಳಾ ಮೃತ ಯುವತಿಯಾಗಿದ್ದು, ಓರ್ವ ತಂಗಿ, ತಾಯಿ ಹಾಗೂ ಬುದ್ದಿಮಾಂದ್ಯ ತಮ್ಮನ ಜೊತೆ ಜೀವನ ನಡೆಸುತ್ತಿದ್ದರು. ಮನೆಯ ಹಿರಿಯ ಮಗಳಾದ ಕಾರಣ ಕುಟುಂಬದ ಜವಾಬ್ದಾರಿ ಸಂಪೂರ್ಣ ಮಂಜುಳ  ಮೇಲೆ ಇದ್ದಿತು. ಈಕೆ ಖಾಸಗಿ ಗಾರ್ಮೆಂಟ್ಸ್ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು.

ಆದ್ರೆ ಕಳೆದ ವಾರ ಕಂಪನಿಯವರು ಬೇಡಿಕೆ ಇಲ್ಲವೆಂದು ಕೆಲಸದಿಂದ ತೆಗೆದು ಹಾಕಿದ್ದು, ಕೆಲಸ ವಿಲ್ಲದೆ ಜೀವನ ನಡೆಸಲಾಗದೆ ಮನನೊಂದು  ತಾಯಿ‌ ಮನೆಗೆ ಬೇಕಾದ ದಿನಸಿ ತರಲು ಅಂಗಡಿಗೆ ಹೋಗಿದ್ದಾಗ ಬುದ್ದಿ ಮಾಂದ್ಯ ತಮ್ಮನ ಎದುರಲ್ಲಿಯೇ ನೇಣು ಬಿಗಿದುಕೊಂಡು ಯುವತಿ ಸಾವನ್ನಪ್ಪಿದ್ದಾರೆ. ಇನ್ನು ಘಟನೆ ಸಂಬಂಧ ಅತ್ತಿಬೆಲೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಮದ್ಯದಂಗಡಿಗೆ ಹೋಗಿ ಲಕ್ಷ ಲಕ್ಷ ಹಣ ಕಳೆದುಕೊಂಡ