Publish Date: Tue, 30 May 2023 (21:43 IST)
Updated Date: Tue, 30 May 2023 (19:09 IST)
ಹಿಂದಿನ ಸರ್ಕಾರದಲ್ಲಿ ಆದ ಪಠ್ಯಪರಿಷ್ಕರಣೆಗೆ ಸಂಬಂಧಿಸಿದಂತೆ ಮಧು ಬಂಗಾರದ ಪ್ರತಿಕ್ರಿಯೆ ನೀಡಿದ್ದಾರೆ.ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಪಠ್ಯಪುಸ್ತಕ ಪರಿಷ್ಕರಣೆಯ ಬಗ್ಗೆ ಉಲ್ಲೇಖ ಮಾಡಿದ್ದೇವೆ.ಅದರಂತೆ ಅವಶ್ಯಕತೆ ಇದ್ದರೆ ಮಾತ್ರ ಪಠ್ಯ ಪರಿಷ್ಕರಣೆ ಮಾಡಲಾಗುವುದು.ನಾಳೆಯಿಂದ ರಾಜ್ಯದ್ಯಂತ ಶಾಲೆಗಳು ಶುರುವಾಗಲಿದೆ.ಮಕ್ಕಳಿಗೆ ತೊಂದರೆಯಾಗದಂತೆ ಪಠ್ಯ ಪರಿಷ್ಕರಣೆ ಮಾಡುತ್ತೇವೆ
ಸಿಎಂ ಜೊತೆ ಸಭೆ ನಡೆಸಿ, ಕಮಿಟಿ ರಚಿಸಿ ಪಠ್ಯಪುಷ್ಕರಣೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು.ಕಳೆದ ಸರ್ಕಾರದಲ್ಲಿ ಆದ ಗೊಂದಲಗಳ ಬಗ್ಗೆ ನಾನು ಹೊಣೆಗಾರನಾಗುವುದಿಲ್ಲ.ನಾಳೆಯಿಂದ ರಾಜ್ಯದಂತ ಶಾಲೆಗಳು ಪ್ರಾರಂಭವಾಗಲಿದೆ.ನಾಳೆ ಶಿವಮೊಗ್ಗ ಗ್ರಾಮಾಂತರದ ಒಂದು ಶಾಲೆಯಲ್ಲಿ ಸ್ವತಃ ನಾನೇ ಹೋಗಿ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳುತ್ತೇನೆ ಎಂದು ಮಧುಬಂಗಾರಪ್ಪ ಹೇಳಿದ್ದಾರೆ.